ಬೆಳ್ಳಿಪ್ಪಾಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ-ಶಾಲಾ ವಿದ್ಯಾರ್ಥಿಗಳಿಗೆ, ಅಂಗನವಾಡಿ ಪುಟಾಣಿಗಳಿಗೆ ಸಿಹಿತಿಂಡಿ ವಿತರಣೆ

0

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ, ಕೂಟೇಲು, ಬೆಳ್ಳಿಪ್ಪಾಡಿ ಮತ್ತು ಶಾಂತಿನಗರ ಅಂಗನವಾಡಿ ಕೇಂದ್ರ ಮತ್ತು ಬೆಳ್ಳಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೆ.17ರಂದು ಸಿಹಿ ತಿಂಡಿ ವಿತರಿಸಲಾಯಿತು.

ಬೆಳ್ಳಿಪ್ಪಾಡಿ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಪ್ರವೀಣ್ ಕೋಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಮೋಹನ ಪಕ್ಕಳ ಕುಂಡಾಪು, ರಾಮಣ್ಣ ಗೌಡ ಗುಂಡೋಲೆ, ಪ್ರಮುಖರಾದ ಕಿರಣ್ ಕುಮಾರ್ ಕೂಟೇಲು, ಗಿರೀಶ್ ಗೌಡ ಅಲಿಮೆ, ಕೇಶವ ಗೌಡ ದೇವಸ್ಯ, ದಯಾನಂದ ಬಾರ್ತೋಳಿ ಮನೋಹರ ಕೂಟೇಲು, ಯತಿನ್ ಕೋರ್ತಾಜೆ, ಮನೋಜ್ ಜತ್ತಿಬೆಟ್ಟು, ಗಣೇಶ್ ಕೈಲಾಜೆ, ಬಾಲಚಂದ್ರ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here