ಶುಭವಿವಾಹ : ಲೋಕೇಶ್ ಬಿ. ಎನ್ – ಸುನೀತಾ

0

ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ನಾರಾಯಣ ಗೌಡರವರ ಪುತ್ರ ಲೋಕೇಶ್ ಬಿ. ಎನ್ ಮತ್ತು ಮೂಡಿಗೆರೆ ಘಟ್ಟದಹಳ್ಳಿ ಪರಮೇಶ್ ಕೆ.ಬಿ ರವರ ಪುತ್ರಿ ಸುನೀತಾರವರ ವಿವಾಹವು ಸೆ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು, ಅತಿಥಿ ಸತ್ಕಾರವು ಬರೆಪ್ಪಾಡಿ ವರನ ಮನೆಯಲ್ಲಿ ಸೆ.17ರಂದು ಜರಗಿತು.

ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾ ಸೀತಾರಾಮ್ ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಆಚರಿಸಿ, ಆ ಪ್ರಯುಕ್ತ ಎರಡು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ನೀಡಲಾಯಿತು.

LEAVE A REPLY

Please enter your comment!
Please enter your name here