ಶಿರಾಡಿಯಲ್ಲಿ ನೆಲ್ಯಾಡಿ ವಿಶ್ವಕರ್ಮ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಪೂಜೆ-ಧಾರ್ಮಿಕ ಸಭೆ

0

ಕಡಬ: ನೆಲ್ಯಾಡಿ ವಿಶ್ವಕರ್ಮ ಸೇವಾ ಸಂಘದ ವತಿಯಿಂದ 16ನೇ ವರ್ಷದ ವಿಶ್ವಕರ್ಮ ಪೂಜೆಯು ಕೇಶವ ಆಚಾರ್ಯ ಇವರ ಪೌರೋಹಿತ್ಯದಲ್ಲಿ ಶಿರಾಡಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಸೆ.22ರಂದು ನಡೆಯಿತು.


ಬೆಳಿಗ್ಗೆ ವಿಶ್ವಕರ್ಮ ಪೂಜೆ ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ ನಡೆದು ಧಾರ್ಮಿಕ ಸಭಾ ಕಾರ್ಯ ನಡೆಯಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಪಿ.ಟಿ. ಕಡಬ ಅವರು ವಹಿಸಿ ಮಾತನಾಡಿ, ಸಂಘದ ಅಭಿವೃದ್ದಿಗೆ ಸಮಾಜ ಭಾಂದವರು ಕೈ ಜೋಡಿಸಬೇಕು. ಈ ಮೂಲಕ ಸಂಘಟಿರಾಗಿ ನಾವು ಇನ್ನಷ್ಟು ಸದೃಢರಾಗಬೇಕು ಎಂದು ಹೇಳಿದ ಅವರು, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪುರೋಹಿತ ಕೇಶವ ಆಚಾರ್ಯರವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಿ.ಕ.ಸೇ.ಸಂ. ನೆಲ್ಯಾಡಿ ಇದರ ನಿವೇಶನ ಖರೀದಿ ಅಧ್ಯಕ್ಷ ಶಶಿಧರ ಕೆ.ಆರ್.ಶಿರಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ತಂಗಮಣಿ ಕೆ.ಆರ್. ಶಿರಾಡಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಶಶೀಂದ್ರ ಆಚಾರ್ಯ ವರದಿ ವಾಚಿಸಿದರು. ಸುರೇಂದ್ರ ಶಿರಾಡಿ ಸ್ವಾಗತಿಸಿ, ಶಿಕ್ಷಕಿ ಉಷಾ ಕೆ.ಕೆ. ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕಿ ಸುಧಾಶ್ರೀ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ರಾಜಶ್ರೀ ಸುರೇಂದ್ರ ಕಡಬ ಪ್ರಾರ್ಥನೆ ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here