ಅ.2ರಿಂದ 8: ಶ್ರೀ ಭಾರತಿ ವಿದ್ಯಾ ಸಂಸ್ಥೆ ಅಲಂಕಾರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ

0

ಅಲಂಕಾರು: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಅ.2ರಿಂದ 8ರವರೆಗೆ ಶ್ರೀ ಭಾರತಿ ವಿದ್ಯಾ ಸಂಸ್ಥೆ ಅಲಂಕಾರಿನಲ್ಲಿ ನಡೆಯಲಿದೆ.

ಅ.2 ಬುಧವಾರದಂದು ಅಪರಾಹ್ನ 2.00 ಗಂಟೆಯಿಂದ ಶಿಬಿರದ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಶ್ರೀ ಕ್ಷೇತ್ರ ಶರವೂರಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ ಸುಬ್ರಹ್ಮಣ್ಯ ರಾವ್ ಇವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಶ್ರೀ ಭಾರತೀ ಶಾಲೆ ಅಲಂಕಾರಿನ ಅಧ್ಯಕ್ಷ ಡಾ| ಸುರೇಶ್ ಕುಮಾರ್ ಕುಡೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


ಸುಮಾರು ಒಂದು ವಾರ ನಡೆಯುವ ಈ ಶಿಬಿರದಲ್ಲಿ ವಿವಿಧ ತರಬೇತಿಗಳು, ಸಾಂಸ್ಕೃತಿಕ ಚಟುವಟಿಕೆಗಳು, ಶ್ರಮದಾನದ ಮೂಲಕ ಸಮಾಜಕ್ಕೆ ಪೂರಕವಾದ ವಿವಿಧ ಕೆಲಸ ಕಾರ್ಯಗಳು ನಡೆಯಲಿವೆ.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ಇವರ ನಿರ್ದೇಶನದಲ್ಲಿ ಮತ್ತು ಆಡಳಿತ ಮಂಡಳಿ, ಶಿಬಿರ ಅನುಷ್ಠಾನ ಸಮಿತಿಯ ಸಹಕಾರದಲ್ಲಿ ಶಿಬಿರ ನಡೆಯಲಿದೆ.
ವಾಣಿಜ್ಯ ಉಪನ್ಯಾಸಕರು ಮತ್ತು ಯೋಜನೆಯ ಸಂಯೋಜನಾಧಿಕಾರಿಗಳಾದ ಕೀರ್ತನ್ ಶಿಬಿರಾಧಿಕಾರಿಗಳಾಗಿದ್ದು, ಉಪನ್ಯಾಸಕರಾದ ತಿಲಕಾಕ್ಷ, ಕು. ಚೈತ್ರ ಮತ್ತು ಕು. ಸುಜಾತ ಸಹ ಶಿಬಿರಾಧಿಕಾರಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here