ನಾಳೆ (ಅ. 6): ಒಡ್ಯ ಅಶ್ವತ್ಥಕಟ್ಟೆ ಆಯುಧಪೂಜಾ ಸೇವಾ ಟ್ರಸ್ಟ್ ವತಿಯಿಂದ ಆಯುಧಪೂಜೆ – ಸ್ವರಸಂಗಮ

0

ಬೆಟ್ಟಂಪಾಡಿ: ಪಾಣಾಜೆ ಗ್ರಾಮದ ಒಡ್ಯ ಅಶ್ವತ್ಥಕಟ್ಟೆ ಆಯುಧ ಪೂಜಾ ಸೇವಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಸಾರ್ವಜನಿಕ ಆಯುಧಪೂಜಾ ಸಮಾರಂಭವು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ. 6 ರಂದು ಒಡ್ಯದಲ್ಲಿ ನಡೆಯಲಿದೆ.


ಬೆಳಿಗ್ಗೆ ಭಜನೆ ಸಹಿತ ಆಯುಧಪೂಜೆಯ ವಿವಿಧ ಧಾರ್ಮಿಕ‌ ವಿಧಿವಿಧಾ‌‌ನಗಳು ನಡೆಯಲಿವೆ.‌ ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ, ಸಭಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ ಇಂಚರ ಮೆಲೋಡಿಸ್ ಮಂಗಳೂರು ಇವರಿಂದ ಬಾಲಕೃಷ್ಣ ನೆಟ್ಟಾರ್ ಸಾರಥ್ಯದಲ್ಲಿ ಝೀ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ‘ಸ್ವರಸಂಗಮ – 2024’ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಗಳು ‘ಸುದ್ದಿ ಲೈವ್’ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

LEAVE A REPLY

Please enter your comment!
Please enter your name here