ಪೆರಿಯಡ್ಕದಲ್ಲಿ ಕಾಮಧೇನು ಮರದ ಗಾಣದ ಶುದ್ಧ ಕೊಬ್ಬರಿ ಎಣ್ಣೆ ಶುಭಾರಂಭ

0

ಪುತ್ತೂರು: ಪೆರಿಯಡ್ಕ ರಾಮಕೃಷ್ಣ ಕಾಂಪ್ಲೆಕ್ಸ್‌ನಲ್ಲಿ ಅ.೦7ರಂದು ಬೆಳಿಗ್ಗೆ ಕಾಮಧೇನು ಮರದ ಗಾಣದ ಶುದ್ಧ ಕೊಬ್ಬರಿ ಎಣ್ಣೆ ಶುಭಾರಂಭಗೊಂಡಿದೆ.

ಮುಖ್ಯ ಅತಿಥಿಗಳಾದ ಪೆರಿಯಡ್ಕ ದುರ್ಗಾಪರಮೇಶ್ವರೀ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಶಂಕರನಾರಾಯಣ ಭಟ್, ಪೆರಿಯಡ್ಕ ಹಾಲು ಸೊಸೈಟಿಯ ಮಾಜಿ ಅಧ್ಯಕ್ಷರಾದ ಜಗದೀಶ್ ರಾವ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಮಹೇಶ್ ಗಾಣಿಗ, ರಾಜೇಶ್ ಗಾಣಿಗ ಅತಿಥಿಗಳನ್ನು ಸ್ವಾಗತಿಸಿದರು. ರಾಮಕೃಷ್ಣ ಕಾಂಪ್ಲೆಕ್ಸ್‌ನ ಮಾಲಕರಾದ ಪ್ರತಾಪ್‌ರವರು ಮರದ ಗಾಣದ ಚಾಲನೆ ಮಾಡಿದರು. ಹಿರಿಯರಾದ ಪೂವಪ್ಪ ಸಪಲ್ಯ, ಉಮೇಶ್ ಶೆಣೈ, ಹರಿರಾಮಚಂದ್ರ ಉಪ್ಪಿನಂಗಡಿ, ಹಾಲು ಸೊಸೈಟಿಯ ಅಧ್ಯಕ್ಷ ಸದಾನಂದ ಶೆಟ್ಟಿ, ಜಯಂತ್ ಪೊರೋಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here