ನೃತ್ಯೋಪಾಸನಾ ತಂಡದ ಸದಸ್ಯರ ನೃತ್ಯ ತರಗತಿ ಬೆಂಗಳೂರಿನಲ್ಲಿ ಆರಂಭ

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಇದರ ವಿದ್ಯಾರ್ಥಿನಿ ಮಧುರಾ ಪ್ರಶಾಂತ್‌ ಇವರ ನೃತ್ಯಾರ್ಣವ ಕಲಾ ಶಾಲೆ ಬೆಂಗಳೂರು ಸಂಜಯನಗರದ ಶ್ರೀಕನ್ಯಕಾ
ಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಆರಂಭಗೊಂಡಿತು.


ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್‌ ಅವರು ಉದ್ಘಾಟಿಸಿ ಶುಭ ಹಾರೈಸಿದರು. ರಾಜ್ಯದ ರಾಜಧಾನಿಯಲ್ಲಿ ನಮ್ಮ ಕಲಾ ತಂಡ ವಿದ್ಯಾರ್ಥಿನಿ, ನನ್ನ ಶಿಷ್ಯೆ ಮಧುರಾ ಪ್ರಶಾಂತ್‌ ಭರತನಾಟ್ಯ ಶಾಸ್ತ್ರೀಯ ನೃತ್ಯ ತರಗತಿ ಆರಂಭಿಸಿರುವುದು ಸಂತಸದ ವಿಚಾರ. ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ತರಗತಿ ಬಹಳ ಉತ್ತಮವಾಗಿ ಮೂಡಿಬರಲಿ ಎಂದರು.


ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ.ಜಿ.ಅನಂತ ಕುಮಾರ್‌, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಾಂತರಾಜ್‌ ಅತಿಥಿಯಾಗಿದ್ದರು. ನೃತ್ಯಾರ್ಣವ ಕಲಾ ಶಾಲೆಯ ನೃತ್ಯ ಶಿಕ್ಷಕಿ ಮಧುರಾ ಪ್ರಶಾಂತ್‌ ಸ್ವಾಗತಿಸಿದರು. ವಿದುಷಿ ಶ್ರೇಯಾ ಭಟ್‌ ನಿರೂಪಿಸಿದರು. ಪ್ರಶಾಂತ್‌ ವಂದಿಸಿದರು.

LEAVE A REPLY

Please enter your comment!
Please enter your name here