ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಇದುಪ್ಪಾಡಿ ಇದರ ಪೂರ್ವ ಶಿಷ್ಟ ಸಂಪ್ರದಾಯಂತೆ ವಾರ್ಷಿಕ ನೇಮೋತ್ಸವ ಫೆ.11 ಮತ್ತು 12 ರಂದು ಜರಗಲಿದೆ.
ಫೆ. 11 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ದೈವಗಳ ತಂಬಿಲ, ಪುಳಿಮರಡ್ಕ ಸ್ಥಾನದಲ್ಲಿ ತಂಬಿಲ, ಸಂಜೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡುವುದು, ರಾತ್ರಿ ಕೆಂಚಿರಾಯ ಸೇವೆ ನಡೆಯಲಿದೆ. ಫೆ. 12 ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮದ ನಂತರ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವದ ನೇಮೋತ್ಸವ ಜರಗಲಿದ್ದು, ಬಳಿಕ ಬೂಳ್ಯ ಪ್ರಸಾದ ವಿತರಣೆ ನಡೆಯಲಿದೆ, ಕಾರ್ಯಕ್ರಮದ ದಿನ ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಮುಂಡಾಳಗುತ್ತು ಶಾಂತಾರಾಮ ರೈ ನಿವೃತ್ತ ಡಿವೈಎಸ್ಪಿ, ಯಜಮಾನರು ಮುಂಡಾಳಗುತ್ತು ಹಾಗೂ ಹದಿನೆಂಟು ವರ್ಗ ಮತ್ತು ಊರ ಸಮಸ್ತರು ತಿಳಿಸಿದ್ದಾರೆ.