ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಲ್ಯಣ್ಣ ಪೂಜಾರಿಯವರು 42 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಉಮೇಶ್ ಆರ್ಕಲ್ ತೋಟ ನಿಧನದಿಂದ ತೆರವಾದ ಸದಸ್ಯ ಸ್ಥಾನಕ್ಕೆ ಮೇ.25ರಂದು ಉಪಚುನಾವಣೆ ನಡೆದಿತ್ತು.
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಯಾನೆ ಪುರುಷೋತ್ತಮ ಸುವರ್ಣ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಲ್ಯಣ್ಣ ಪೂಜಾರಿರವರು ಇದೀಗ ಅಂತಿಮ ಕಣದಲ್ಲಿದ್ದರು.
ಎಲ್ಯಣ್ಣ ಪೂಜಾರಿಯವರು 327 ಮತಗಳನ್ನು ಪಡೆದು ಜಯಗಳಿಸಿದರೆ. ಯತೀಶ್ ಯಾನೇ ಪುರುಷೋತ್ತಮ ಸುವರ್ಣರವರು 287 ಮತಗಳನ್ನು ಪಡೆದು ಪರಜಿತರಾಗಿದ್ದಾರೆ.
ಈ ವಾರ್ಡ್ ನಲ್ಲಿ 413 ಗಂಡಸರು ಹಾಗೂ 448 ಮಹಿಳಾ ಮತದಾರರು ಸೇರಿ ಒಟ್ಟು 861 ಮತದಾರರಿದ್ದು, ಈ ಪೈಕಿ 308 ಗಂಡಸರು ಹಾಗೂ 317 ಮಹಿಳಾ ಮತದಾರರು ಸೇರಿ ಒಟ್ಟು 625 ಮಂದಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ 72.59% ಮತಚಲಾವಣೆಯಾಗಿತ್ತು. ಈ ವಾರ್ಡ್ ನಲ್ಲಿ ಕಳೆದ ಆರು ಅವಧಿಯಲ್ಲಿಯೂ ಬಿಜೆಪಿ ಬೆಂಬಲಿತ ಸದಸ್ಯರು ಜಯಗಳಿಸಿದ್ದು, ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಇದೀಗ ಹಲವಾರು ವರುಷಗಳ ಬಳಿಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.