ಇದು ಮೂಲ, ಇದು ಅಪ್ಪೆ ಜೋಕುಲು, ನಾವೆಲ್ಲ ಒಂದು,ನಾವೆಲ್ಲ ಬಂಧು – ಡಾ.ಕೆ ವಿ ರೇಣುಕಾಪ್ರಸಾದ್
ಪುತ್ತೂರು: ಒಕ್ಕಲಿಗರು ಸಮರಕ್ಕೂ ಸಿದ್ದ, ಸೌಜನ್ಯಕ್ಕೂ ಸಿದ್ದ ಎಂಬ ಮಾತಿದೆ. ಆದರೆ ನಾವು ಮೊದಲು ಒಂದಾಗಬೇಕು. ಹಾಗಾಗಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಇದು ಮೂಲ, ಇದು ತಾಯಿ ಇದ್ದಂತೆ, ಅಪ್ಪೆ ಜೋಕುಲು. ನಾವೆಲ್ಲ ಒಂದು, ನಾವೆಲ್ಲ ಬಂಧುಗಳು ಎಂದು ಸಮಾಜ ಬಾಂಧವರಿಗೆ ಕಿವಿ ಮಾತು ಹೇಳಿದರು.
ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ.1ರಂದು ನಡೆದ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಥಮ ಮಹಾ ಅಧಿವೇಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.