ಪುತ್ತೂರು: ಮಾಣಿಯಲ್ಲಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದದ ಶಾಖೆಯಲ್ಲಿ ಮುಂಗಾರು ಹಂಗಾಮ ಠೇವಣಿ, ಸಾಲ ಯೋಜನೆಗಳ ಉದ್ಘಾಟನೆ ಜೂ.5ರಂದು ನಡೆಯಿತು.
ಮಾಣಿ ಕುಲಾಲ ಸೇವಾ ಸಂಘದ ಅಧ್ಯಕ್ಷ ಮೋಹನ್ ಕುಲಾಲ್ ರವರು ಉದ್ಘಾಟಿಸಿದರು. ಮೆಸ್ಕಾಂ ಅಧಿಕಾರಿ ಪ್ರಸಾದ್ ಹಾಗೂ ಅಂಚೆ ಮಾಸ್ಟರ್ ರಾಜೇಶ್ ಕುಮಾರ್ ರವರು ಠೇವಣಿ ಹಾಗೂ ಸಾಲದ ಕರಪತ್ರವನ್ನು ಬಿಡುಗಡೆಗೊಳಿಸಿದರು. ಸಹಕಾರ ಸಂಘದ ನಿರ್ದೇಶಕ ಪ್ರಶಾಂತ್ ಬಂಜನ್, ದುರ್ಗಾ ಕ್ಲಿನಿಕ್ ನ ಡಾ. ದಿನೇಶ್, ಮೆಸ್ಕಾಂ ಅಧಿಕಾರಿ ಪ್ರಸಾದ್, ಕುಲಾಲ ಸಂಘದ ಅಧ್ಯಕ್ಷ ಮೋಹನ್ ಕುಲಾಲ್, ಅಂಚೆ ಮಾಸ್ಟರ್ ರಾಜೇಶ್ ಕುಮಾರ್ ರವರು ಸಹಕಾರ ಸಂಘಕ್ಕೆ ಶುಭ ಹಾರೈಸಿದರು. ಸಹಕಾರ ಸಂಘದ ಉಪ ಪ್ರಧಾನ ವ್ಯವಸ್ಥಾಪಕಿ ಸುಜಾತ ರವರು ಸ್ವಾಗತಿಸಿದರು. ಕುಲಾಲ ಸಮಾಜ ಸೇವಾ ಸಂಘದ ಸದಸ್ಯರಾದ ಭೋಜ ನಾರಾಯಣ, ರಾಮಚಂದ್ರ ಕುಲಾಲ್ ಹಾಗೂ ಸಹಕಾರ ಸಂಘದ ಗ್ರಾಹಕರು ಉಪಸ್ಥಿತರಿದ್ದರು. ಸಹಕಾರ ಸಂಘದ ಸಿಬ್ಬಂದಿ ಅಶ್ವಿನಿ ವಂದಿಸಿದರು. ನೇಹಾ, ಪ್ರದೀಪ್ ಕೆ ಎಸ್ ಹಾಗೂ ನಿತ್ಯ ನಿಧಿ ಸಂಗ್ರಹಕರಾದ ದಯಾನಂದ ಮತ್ತು ಜಗದೀಶರವರು ಸಹಕರಿಸಿದರು.