ಪುತ್ತೂರು ಕಿಲ್ಲೆ ಮೈದಾನದಲ್ಲಿ ನವತೇಜ ಟ್ರಸ್ಟ್ ಪುತ್ತೂರು, ಅನ್ಯಾನ್ಯ ಸಂಸ್ಥೆಗಳ ಸಹಯೋಗದಿಂದ ಹಲಸು, ಹಣ್ಣುಗಳ ಮೇಳ, ಸಂಜೆ ೫ರಿಂದ ಪನಸೋಪಾಖ್ರಾನ ತಾಳಮದ್ದಳೆ
ಪುತ್ತೂರು ಬೈಪಾಸ್ ದರ್ಶನ ಕಲಾಮಂದಿರದಲ್ಲಿ ಸಂಜೆ ೫.೩೦ರಿಂದ ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು, ಸ್ವಾಮಿ ಕಲಾಮಂದಿರದ ವತಿಯಿಂದ ಪ್ರವಚನಕಾರರು ವೀಣಾ ಬನ್ನಂಜೆಯವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಸಮಾರೋಪ, ಭಗವದರ್ಪಣ
ಪುತ್ತೂರು ಸುದ್ದಿ ಮಾಹಿತಿ ಕೇಂದ್ರದಿಂದ (ಝೂಮ್) ಆನ್ಲೈನ್ನಲ್ಲಿ ಮಧ್ಯಾಹ್ನ ೨ರಿಂದ ಎಸ್ಎಸ್ಎಲ್ಸಿ/ಪಿಯುಸಿ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಉಚಿತ ಮಾಹಿತಿ ಕಾರ್ಯಗಾರ
ಬೆಳಂದೂರು ಗ್ರಾಮದ ಅಜಿರಂಗಳ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಬಾಲಾಲಯ ಪ್ರತಿಷ್ಠೆ
ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಸಂಜೆ ೫ಕ್ಕೆ ಸ್ವರ್ಣ ಪಾದುಕೆಯ ಆಗಮನ, ಪೂರ್ಣಕುಂಭ ಸ್ವಾಗತ-ಧೂಳೀ ಪೂಜೆ
ಉಪ್ಪಿನಂಗಡಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಜೆ ೩ರಿಂದ ಸಾರ್ವಜನಿಕ ಶನೈಶ್ವರ ಪೂಜೆ, ರಾತ್ರಿ ೮ಕ್ಕೆ ಸನಾತನ ಹಿಂದೂ ಧಾರ್ಮಿಕ ಸಭೆ
ನೆಲ್ಯಾಡಿ ಗ್ರಾಮದ ಪುಚ್ಚೇರಿ ಹಿ.ಪ್ರಾ. ಶಾಲಾ ವಠಾರದಲ್ಲಿ ಬೆಳಿಗ್ಗೆ ೧೦ರಿಂದ ಪೂರ್ವ ವಿದ್ಯಾರ್ಥಿ ಸಂಘದಿಂದ ನಿವೃತ್ತರಾದ ಶಾಲಾ ಮುಖ್ಯಗುರು ಪದ್ಮನಾಭ ಪಿ. ಯವರಿಗೆ ಬೀಳ್ಕೊಡುಗೆ
ಕಾಣಿಯೂರು ಗ್ರಾ.ಪಂ ಸಭಾಂಗಣದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಸಭೆ, ಅಭಿನಂದನೆ
ಗೃಹಪ್ರವೇಶ
ಪಡ್ನೂರು ಗ್ರಾಮದ ನೆಲಪ್ಪಾಲುವಿನಲ್ಲಿ ನೂತನ ಮನೆ `ಯುಕ್ತ ನಿಲಯ’ದ ಗೃಹಪ್ರವೇಶ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬೈಲುಗುತ್ತು ಸತ್ಯಶಂಕರ ರೈ (ಗುಡ್ಡಪ್ಪ)ಯವರ ಉತ್ತರಕ್ರಿಯೆ