ಉಪ್ಪಿನಂಗಡಿ: ಈದುಲ್ ಅಝ್ಹಾ (ಬಕ್ರೀದ್) ಆಚರಣೆಯ ಪ್ರಯುಕ್ತ ಕರುವೇಲು ಬದ್ರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ, ಈದ್ ಹಾಗೂ ಖುತುಬ್ ಪಾರಾಯಣವನ್ನು ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಝರಿ ಅವರ ನೇತೃತ್ವದಲ್ಲಿ ನಡೆಸಿದರು.
ಸರ್ವ ಜನತೆಗೆ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ, ಬಕ್ರಿದ್ ಹಬ್ಬವು ಶಾಂತಿ, ಸಮಾನತೆ, ಸಹೋದರತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತದೆ. ಮಾನವೀಯತೆಯೇ ಧರ್ಮಗಳ ಮೂಲವಾಗಿದ್ದು, ಇದನ್ನು ಅರಿತುಕೊಂಡು ಬಾಳಬೇಕು ಎಂದರು.
ಈ ಸಂದರ್ಭ ಮಸೀದಿ ಇಮಾಂ ಅಬ್ದುಲ್ ಸಲಾಂ ಮುಸ್ಲಿಯಾರ್, ಜಮಾಅತ್ ಅಧ್ಯಕ್ಷ ಉಮರಬ್ಬ ತೋಜ, ಕಾರ್ಯದರ್ಶಿ ಅಬ್ದುಲ್ ರಝಾಕ್, ಕೋಶಾಧಿಕಾರಿ ಇಕ್ಬಾಲ್ ಪಚ್ಚಾಡಿ , ಉಪಾಧ್ಯಕ್ಷ ಅಬ್ದುಲ್ ರಝಾಕ್ ಬರೆಮೇಲ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ಲತೀಫ್ (ಮುನ್ನಾಕ), ದಿಕ್ರ್ ಹಲ್ಖಾ ಸಮಿತಿಯ ಅಧ್ಯಕ್ಷ ಶರೀಫ್ ಹಾಗೂ ಜಮಾಅತ್ನ ಹಿರಿಯರಾದ ಮೊಯಿದೀನ್ ಹಾಜಿ ಕಮರ್, ಬಿ. ಟಿ. ಅಬ್ದುಲ್ ರಹ್ಮಾನ್ ಹಾಜಿ, ಅಬೂಬಕ್ಕರ್ ಖಾಸಿಮಿ ಮತ್ತಿತರರು ಭಾಗವಹಿಸಿದರು.