ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಕಂಪ್ಯೂಟರ್ ಸಾಫ್ಟ್ವೇರ್ ಪ್ರಾಜೆಕ್ಟ್ ಪ್ರೆಸೆಂಟೇಶನ್ ಕಾರ್ಯಕ್ರಮ ಜೂ.೪ರಂದು ಬೆಥನಿ ಸಭಾಂಗಣದಲ್ಲಿ ನಡೆಯಿತು.
ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ರವರ ನೇತೃತ್ವದಲ್ಲಿ ಸುಮಾರು 20 ವಿದ್ಯಾರ್ಥಿಗಳು ನಾಲ್ಕು ವಿವಿಧ ಪ್ರಾಜೆಕ್ಟ್ಗಳನ್ನು ರಚಿಸಿ ಅತಿಥಿಗಳು, ಅಧ್ಯಾಪಕರು ಹಾಗೂ ಐಟಿಐ ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಿದರು. ಐಟಿಐನ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ಎಸ್ಆರ್ಕೆ ಇಂಡಸ್ಟ್ರೀಸ್ನ ವಿವಿಧ ಉತ್ಪನ್ನಗಳ ಸೇಲ್ಸ್, ಸ್ಟಾಕ್ ಮತ್ತು ಬಿಲ್ಲಿಂಗ್ ಸಿಸ್ಟಮ್, ಜೀವನ್ ಜ್ಯೋತಿ ಸ್ಪೆಷಲ್ ಸ್ಕೂಲ್ ಮರ್ದಾಳ ಇವರಿಗೆ ವಿದ್ಯಾರ್ಥಿಗಳ ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಸಾಫ್ಟ್ವೇರ್, ಹಾಲು ಉತ್ಪಾದಕರ ಕೋ ಆಪರೇಟಿವ್ ಸೊಸೈಟಿ ಪೆರಿಯಡ್ಕ ಇವರಿಗೆ ಸದಸ್ಯರ ವಿವರ, ಹಾಲು ಸಂಗ್ರಹಣೆ, ಲಾಭ ಮುಂತಾದ ವಿಷಯಗಳನ್ನು ನಿರ್ವಹಿಸುವ ಸಾಫ್ಟ್ವೇರ್ ಹಾಗೂ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಕಚೇರಿ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ಸಾಫ್ಟ್ವೇರ್ ತಯಾರಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಮರ್ದಾಳ ಜೀವನ್ ಜ್ಯೋತಿ ಸ್ಪೆಷಲ್ ಸ್ಕೂಲ್ನ ನಿರ್ದೇಶಕರಾದ ರೆ. ಫಾ. ಜಕರಿಯಾಸ್ ನಂದಿಯಾಟ್ ಓಐಸಿಯವರು ವಿದ್ಯಾರ್ಥಿಗಳ ಪರಿಶ್ರಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನೆಲ್ಯಾಡಿ ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಜೈಸನ್ ಸೈಮನ್ ಓಐಸಿ ಅವರು ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಹಾಗೂ ಅವರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇನ್ನೋರ್ವ ಅತಿಥಿ ರೆ. ಡಾ. ವರ್ಗಿಸ್ ಕೈಪನಡ್ಕ ಓಐಸಿ ಅವರು ವಿದ್ಯಾರ್ಥಿಗಳ ಕೌಶಲ್ಯವನ್ನು ಶ್ಲಾಘಿಸಿದರು. ಬೆಥನಿ ಐಟಿಐನ ಪ್ರಾಂಶುಪಾಲ ಸಜಿ ಕೆ ತೋಮಸ್ರವರು ವಿದ್ಯಾರ್ಥಿಗಳಿಗೆ ಹಾಗೂ ಪ್ರಾಜೆಕ್ಟ್ ರಚಿಸಲು ನೇತೃತ್ವ ನೀಡಿದ ಅಧ್ಯಾಪಕರನ್ನು ಅಭಿನಂದಿಸಿದರು. ಸುನಿಲ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ವಂದಿಸಿದರು.