ಜೆಸಿಐ ಮಧ್ಯಂತರ ಸಮ್ಮೇಳನ ; ನೆಲ್ಯಾಡಿ ಜೇಸಿಐಗೆ ಹಲವು ಪ್ರಶಸ್ತಿ, ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರಿಗೆ ’ವಿದ್ಯಾಚೇತನ್’ಪ್ರಶಸ್ತಿ

0

ನೆಲ್ಯಾಡಿ: ಜೆಸಿಐ ಭಾರತ ವಲಯ 15ರ ದುಂದುಬಿ ಮದ್ಯಂತರ ಸಮ್ಮೇಳನ-2025 ನಿಟ್ಟೆಯ ಸನ್ಮಾನ ರೆಸಿಡೆನ್ಸಿಯಲ್ಲಿ ಜೆಸಿಐ ಬೆಲ್ಮಣ್ ಘಟಕದ ಆಶ್ರಯದಲ್ಲಿ ನಡೆಯಿತು.

42 ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಘಟಕ ಜೆಸಿಐ ನೆಲ್ಯಾಡಿ ತನ್ನ ಧನಾತ್ಮಕ ವಿಕಸನ ಕಾರ್ಯಕ್ರಮಗಳು, ಸಾರ್ವಜನಿಕ ಸಂಪರ್ಕ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮುಖಾಂತರ ನೆಲ್ಯಾಡಿ ಪರಿಸರದಲ್ಲಿ ಮನೆ ಮಾತಾಗಿರುವ ಸಂಸ್ಥೆ. ಈ ಸಲದ ಜೆಸಿಐ ಮದ್ಯಂತರ ಸಮ್ಮೇಳನದಲ್ಲಿ ಜೆಸಿಐ ನೆಲ್ಯಾಡಿ ಘಟಕಕ್ಕೆ ಹಲವಾರು ಮನ್ನಣೆಗಳು ದೊರಕಿವೆ.Outstanding local organisation runner award, ಡೈಮಂಡ್ ಘಟಕ ಪ್ರಶಸ್ತಿ,outstanding president runner award ಹಾಗೂ ಇನ್ನಿತರ ಮನ್ನಣೆ ಗಳು ದೊರಕಿವೆ. ಘಟಕ ಭಾಗವಹಿಸಿದ ವಿಡಿಯೋ ಕಾಂಟೆಸ್ಟ್ ವಿಭಾಗದಲ್ಲಿ ಬಹುಮಾನ ಪಡೆದುಕೊಂಡಿದೆ.

ಜೆಸಿಐ ಭಾರತದ ವಿದ್ಯಾನಿಧಿಗಾಗಿ ದೇಣಿಗೆ ನೀಡಿದ ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರಿಗೆ ವಿದ್ಯಾಚೇತಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಹಿಂದೆ ಅಧ್ಯಕ್ಷರು ವಲಯದ ಏಕಮಾತ್ರ ELITE president award ಗೂ ಭಾಜನರಾಗಿದ್ದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಅಭಿಲಾಶ್ ಬಿ.ಎ., ವಲಯ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ, ನೆಲ್ಯಾಡಿ ಜೇಸಿಐನ ಪ್ರವೀಣಿ ಶೆಟ್ಟಿ, ಸುಚಿತ್ರ ಬಂಟ್ರಿಯಾಲ್, ದಯಾಕರ ರೈ, ಪುರಂದರ ಗೌಡ, ಜಾಹ್ನವಿ, ದಯಾನಂದ ಕೆ.ಆದರ್ಶ, ಹರೀಶ್ ರೈ ಹಾಗೂ ಆರಾಧ್ಯಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here