ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆ ಜೂ.7ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುವ ಡಾ. ಶ್ರೀಶ ಭಟ್ ಇವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಆದಷ್ಟು ದೂರವಿರೋಣ. ನಾವು ಜೀವನದಲ್ಲಿ ಶಿಸ್ತು ಮೂಡಿಸಿಕೊಂಡಲ್ಲಿ ಮಕ್ಕಳು ಅನುಸರಿಸುವುದು ಸಹಜ ಮಕ್ಕಳಲ್ಲಿ ಪದಬಂಧ ವಾರ್ತಾ ಪತ್ರಿಕೆ ಓದುವ ಹವ್ಯಾಸ ಹಾಗೂ ಮಾತನಾಡುವ ಕೌಶಲ್ಯಗಳನ್ನು ಬೆಳೆಸುವುದಕ್ಕಾಗಿ ಪ್ರೇರಣೆ ನೀಡುವುದು ನಮ್ಮ ಜವಾಬ್ದಾರಿ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆಯಲ್ಲಿ ಶಿಕ್ಷಕ-ರಕ್ಷಕ ಸಂಘಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಹತ್ತನೇ ತರಗತಿಯ ಪೋಷಕ ಪ್ರತಿನಿಧಿ ಪ್ರಕಾಶ್ ರೈ ಬೈಲಾಡಿ ಇವರನ್ನು ಆಯ್ಕೆ ಮಾಡಲಾಯಿತು.
ಪೋಷಕ ಪ್ರತಿನಿಧಿಗಳಾಗಿ ಎಲ್ ಕೆ ಜಿ ವಿಭಾಗದಿಂದ ಗಿರೀಶ್ ಹಾಗೂ ಸೌಮ್ಯ, ಯುಕೆಜಿ ವಿಭಾಗದಿಂದ ಗಿರೀಶ್ವರ ಭಟ್ ಹಾಗೂ ಸ್ವರ್ಣಲತಾ, ಒಂದನೇ ತರಗತಿಯಿಂದ ಪುರುಷೋತ್ತಮ ಹಾಗೂ ಭಾರತಿ, ಎರಡನೆ ತರಗತಿಯಿಂದ ಸನತ್ ರೆ, ಹಾಗೂ ಸೌಮ್ಮ ಮೂರನೇ ತರಗತಿಯಿಂದ ಆದಿತ್ಯ ಘಾಟೆ ಹಾಗೂ ಹಿತಶ್ರೀ ನಾಲ್ಕನೇ ತರಗತಿಯಿಂದ ಸಂತೋಷ್ ಹಾಗೂ ಉಷಾ, 5ನೇ ತರಗತಿಯಿಂದ ಧನಂಜಯ ರೈ ಹಾಗೂ ಸೌಮ್ಯ, ಆರನೇ ತರಗತಿಯಿಂದ ನರೇಂದ್ರ ಎನ್ ಹಾಗೂ ವಿದ್ಯಾ ಪ್ರಸಾದ್, ಏಳನೇ ತರಗತಿಯಿಂದ ಅಚ್ಯುತ ಭಟ್ ಹಾಗೂ ಆಶಾಲತಾ, ಎಂಟನೇ ತರಗತಿಯಿಂದ ಡಾ.ಸತ್ಯನಾರಾಯಣ ಪುಣಿತಾಯ ಹಾಗೂ ಸಂಧ್ಯಾ, 9ನೇ ತರಗತಿಯಿಂದ ನವೀನ್ ರೈ ಬದಿಯಾರು ಹಾಗೂ ದಿವ್ಯ 10ನೇ ತರಗತಿಯಿಂದ ಪ್ರಕಾಶ್ ರೈ ಬೈಲಾಡಿ ಮತ್ತು ರತ್ನಾವತಿ ಆಯ್ಕೆಗೊಂಡರು. ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀರಂಗನಾಥ ರೈ ಗುತ್ತು ವಹಿಸಿದ್ದರು.
ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟ್ಟಾವು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಕ್ಷಿತಾ ಮತ್ತು ಬಳಗದವರು ಪ್ರಾರ್ಥಿಸಿದರು.ಸಹ ಶಿಕ್ಷಕಿ ಸಂಧ್ಯಾ ವಿ ಸ್ವಾಗತಿಸಿದರು. ಸಹಶಿಕ್ಷಕಿ ಕುಮಾರಿ ಭಾಗ್ಯಶ್ರೀ ವಂದಿಸಿದರು. ಶರ್ಮಿಳ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.