ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಕೃಪಾ ಪೋಷಿತ ಸಂಚಾರಿ ಚಿಕ್ಕಮೇಳ ತಿರುಗಾಟ ಆರಂಭ

0

ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಕೃಪಾ ಪೋಷಿತ ಸಂಚಾರಿ ಚಿಕ್ಕ ಮೇಳ ಪಡುಮಲೆ ಈ ವರ್ಷದ ತಿರುಗಾಟವು 14 ಸಂಜೆ ಗಂಟೆ 5ಕ್ಕೆ ಗೆಜ್ಜೆ ಪೂಜೆಯೊಂದಿಗೆ ಶ್ರೀ ಕ್ಷೇತ್ರದ ಸನ್ನಿದಿಯಲ್ಲಿ ಉದ್ಘಾಟನೆಗೊಂಡಿತು.

ಶ್ರೀ ಕೖಷ್ಣ ಭಟ್ ಉಂಡೆಮನೆ, ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕ ನಿಡಿಯಡ್ಕ ನಿವೖತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು ಒಟ್ಟು ಸೇರಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಸುಳ್ಯಪದವು ಬಾಲಸುಬ್ರಮಣ್ಯ ಹಿ.ಪ್ರಾ.ಶಾಲಾ ನಿವೖತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು ಮಾತನಾಡಿ, ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವರ ಅನುಗ್ರಹದಲ್ಲಿ ಹೊರಡುವ ಚಿಕ್ಕಮೇಳವು ಮನೆಮನೆ ತಿರುಗಾಟ ನಡೆಸುವ ಮೂಲಕ ಯಶಸ್ವಿಗೊಳ್ಳುವ ಜತೆಗೆ ಮಕ್ಕಳಲ್ಲಿ ಧರ್ಮ ಜಾಗೖತಿ ಮೂಡಿಸುವಂತಾಗಲಿ ಎಂದು ಶುಭ ಹಾರೖೆಸಿದರು.

ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕ ನಿಡಿಯಡ್ಕ ಮಾತನಾಡಿ, ಚಿಕ್ಕಮೇಳ ಚೊಕ್ಕ ಮೇಳವಾಗಿ ಬೆಳಗಲಿ ಎಂದು ಶುಭಹಾರೖೆಸಿದರು.

ಪ್ರಾರಂಭದಲ್ಲಿ ಶ್ರೀ ಕ್ಷೇತ್ರದ ಸನ್ನಿದಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉದಯ ಕುಮಾರ್ ಪಡುಮಲೆ, ಗೋಪಾಲ ನಾಯ್ಕ ದೊಡ್ಡಡ್ಕ, ಮೇಳದ ವ್ಯವಸ್ಥಾಪಕ ದಾಮೋದರ ಪಾಟಾಳಿ ಶರವು,  ಯಕ್ಷಗಾನ ಗುರು ಸುರೇಶ್ ಹೆಗಡೆ ಕುಳದಪಾರೆ, ಗಣೇಶ್ ಭಟ್ ಈಶಮೂಲೆ, ಕಲಾವಿದರಾದ ಉತ್ತಮ್ ಭಟ್ ಪಡ್ಪುಜಯರಾಂ ಕೆದಿಲಾಯ, ಸುಂದರ ನಾಯ್ಕ ಆರ್ಲಪದವು ಸ್ಥಳೀಯರಾದ ಪುರಂದರ ರೖೆ ಸೇನೆರಮಜಲು, ಗಿರೀಶ್ ಕನ್ನಡ್ಕ, ಕುಶಾಲಪ್ಪ ನಾಯ್ಕ ದೊಡ್ಡಡ್ಕ, ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಶಿಕ್ಷಕ ಚಂದ್ರಶೇಖರ ಸುಳ್ಯಪದವು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here