ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ – ಸುಂದರ ಭಾರತ ಪುಸ್ತಕ ಟ್ರಸ್ಟ್ ನೀಡುತ್ತಿರುವ ನೋಟ್ ಬುಕ್ ವಿತರಣೆ

0

ಪುತ್ತೂರು: ಸುಳ್ಯ ತಾ.ಪಂ ಸಭಾಭವನದಲ್ಲಿ ನಡೆದ ಸುಂದರ ಭಾರತ ಟ್ರಸ್ಟ್ ಕೊಡಮಾಡಿದ ನೋಟ್ ಪುಸ್ತಕವನ್ನು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಇವರು ವೀರಮಂಗಲ ಪಿಎಂಶ್ರೀ ಶಾಲೆಗೆ ವಿತರಿಸಿ ಶುಭಹಾರೈಸಿದರು. ಸುಳ್ಯ ಕ್ಷೇತ್ರದ ಮಾನ್ಯ ಶಾಸಕರಾದ ಕು.ಭಾಗೀರಥಿ ಮುರಳ್ಯ ಅಧ್ಯಕ್ಷತೆ ವಹಿಸಿದ್ದರು. ವೀರಮಂಗಲ ಪಿಎಂಶ್ರೀ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಪುಸ್ತಕ ಸ್ವೀಕರಿಸಿದರು.

ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರಸಭಾಧ್ಯಕ್ಷರಾದ ಶಶಿಕಲಾ ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥರಾದ ಪ್ರತಾಪ್ ಪರಾಶರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here