ಕಾಣಿಯೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನಾಣಿಲದಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಶಾಲಾ ನಾಯಕಿಯಾಗಿ ಅನನ್ಯ ಮತ್ತು ಉಪನಾಯಕಿಯಾಗಿ ಶ್ರಾವ್ಯ ಆಯ್ಕೆಯಾದರು. ಗೃಹ ಮಂತ್ರಿಯಾಗಿ ನಿವೇದ್, ವಾರ್ತಾಮಂತ್ರಿಯಾಗಿ ಜಯಲಕ್ಷ್ಮಿ, ವಿರೋಧ ಪಕ್ಷದ ನಾಯಕರಾಗಿ ಅಕ್ಷಯ್, ನೀರಾವರಿ ಮಂತ್ರಿಯಾಗಿ ದಿವಿತ್, ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ ಸಾನ್ವಿ, ಕ್ರೀಡಾ ಮಂತ್ರಿಯಾಗಿ ದಿವನ್, ಗ್ರಂಥಾಲಯ ಮಂತ್ರಿಯಾಗಿ ಬೃಂದಾ, ಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಾ, ಸ್ವಚ್ಛತಾ ಮಂತ್ರಿಯಾಗಿ ಕಾವ್ಯ, ಸಭಾಪತಿಯ ಸ್ಥಾನಕ್ಕೆ ಪೂರ್ವಿಯವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ಪದ್ಮಯ್ಯಗೌಡರವರು ಚುನಾವಣೆಯ ಮಹತ್ವ ಹಾಗೂ ಸಂಸತ್ತಿನ ಕಾರ್ಯವೈಖರಿಯನ್ನು ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಮೋಹಿನಿ, ಶೋಭಾ, ನಂದಿನಿ, ಸುನಿಲ್ ಕುಮಾರ್, ಚೇತನಾ, ಶಿಶ್ಮಿತಾ ಅವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಅನುಭವವನ್ನೊದಗಿಸಿ ಮಾರ್ಗದರ್ಶನವನ್ನು ನೀಡಿದರು