ನೆಲ್ಯಾಡಿ: ಇಲ್ಲಿನ ಎಲೈಟ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಸೈಂಟ್ ಮೇರಿಸ್ ಟ್ರೋಫಿ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಆರ್ಲ ಸೈಂಟ್ ಮೇರಿಸ್ ಚರ್ಚ್ನ ಯುವ ಘಟಕ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ ನೇತೃತ್ವದಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಕುಲಶೇಖರ ಕೊರ್ಡಲ್ ಚರ್ಚ್ನ ಆರುಷ್, ಸೂರಜ್ ತಂಡ ಪ್ರಥಮ, ನೆಲ್ಯಾಡಿಯ ಲಿಜೊ, ಜೆಸ್ವಿನ್ ತಂಡ ದ್ವಿತೀಯ, ಬಜಗೋಳಿಯ ಅನೂಪ್, ಬಿಬಿನ್ ತಂಡ ತೃತೀಯ, ತೋಟತ್ತಾಡಿಯ ರೋಬಿನ್, ಟಿನೋಶ್ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಹಾಗೂ ಆರ್ಲ ಚರ್ಚ್ನ ಧರ್ಮಗುರು ವಂ.ಫಾ. ಶಾಜಿ ಮ್ಯಾಥ್ಯು, ವಂ.ಫಾ.ಅಲೆಕ್ಸ್, ಯುವ ಮುಖಂಡರಾದ ಶ್ರೀಜಿತ್, ಶಾರೋನ್. ಜಿನು ಡಿವಿನ್, ಜಿತು, ಅಜಿತ್, ಪ್ರಥ್ವಿನ್ ಹಾಗೂ ಟ್ರಸ್ಟಿಗಳಾದ ಹೃದಿತ್, ಜೈಸನ್, ಜೋಸ್ಟಿನ್ ಉಪಸ್ಥಿತರಿದ್ದರು.