ನಿಡ್ಪಳ್ಳಿ: ಪಾಣಾಜೆ ವಿದ್ಯಾವರ್ಧಕ ಸಂಘ ಮತ್ತು ಪಾಣಾಜೆ ಸುಬೋಧ ಪ್ರೌಢಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಲ್ಯಾಂಡ್ ಟ್ರೇಡ್ಸ್ ಮಂಗಳೂರು ಹಾಗೂ ಹಿರಿಯ ವಿದ್ಯಾರ್ಥಿ ರಾಕೇಶ್ ರೈ ಕಡಮಾಜೆ ಅವರು ಜಂಟಿಯಾಗಿ ಕೊಡುಗೆ ನೀಡಿದ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ಜೂ.18 ರಂದು ಬೆಳಿಗ್ಗೆ ಗಂಟೆ 10.30 ಕ್ಕೆ ಸುಬೋಧ ಸಭಾಭವನದಲ್ಲಿ ನಡೆಯಲಿದೆ.
ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ಲ್ಯಾಂಡ್ ಟ್ರೇಡ್ ನ ಆಡಳಿತ ನಿರ್ದೇಶಕ ಕೆ.ಶ್ರೀನಾಥ್ ಹೆಬ್ಬಾರ್ ಉದ್ಘಾಟನೆ ಮಾಡಲಿರುವರು. ಬೆಂಗಳೂರು ಎಸ್.ಸಿ ಟಿಪಿಎಲ್ ಇದರ ನಿರ್ದೇಶಕ, ಮುಖ್ಯ ಹಣಕಾಸು ಅಧಿಕಾರಿ ಹರ್ಷಿತ್ ಶೇಖರ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟಿವಿ ನಿರೂಪಕಿ ಹೇಮಾ ಜಯರಾಮ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.