ಪುತ್ತೂರು: ಪುತ್ತೂರು ಕಸಬ ಸಿ.ಪಿ.ಪಿ ಪ್ಲಾಜಾ ಬಳಿಯ ಕಾಮತ್ ಕಂಪೌಂಡ್ ನಿವಾಸಿ ಅಶೋಕ್ ಕಾಮತ್(69ವ)ರವರು ಜೂ.17ರಂದು ನಿಧನರಾದರು.
ಪುತ್ತೂರು ಮುಖ್ಯರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ಕಾರ್ಯಾಚರಿಸುತ್ತಿದ್ದ ಪಾಪ್ಯುಲರ್ ಹೊಟೇಲ್ನಲ್ಲಿ ಬೀಡ ವ್ಯಾಪಾರ ನಡೆಸುತಿದ್ದ ಅವರು ಬಳಿಕ ಹೊಟೇಲ್ ವ್ಯವಹಾರ ಸ್ಥಗಿತಗೊಂಡ ಬಳಿಕ ಮನೆಯಲ್ಲೇ ಇದ್ದರು.
ಅಲ್ಪಕಾಲದ ಅನಾರೋಗ್ಯದಿಂದಾಗಿ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಜಯಲಕ್ಷ್ಮೀ ಕಾಮತ್, ಪುತ್ರ ವಿನಾಯಕ್ ಕಾಮತ್, ಸಹೋದರಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ನಾಳೆ(ಜೂ.18)ಕ್ಕೆ ಅಂತ್ಯಕ್ರಿಯೆ
ಮೃತರ ಅಂತ್ಯಕ್ರಿಯೆಯು ಜೂ.18ರಂದು ಚಿಕ್ಕಪುತ್ತೂರು ಸ್ಮಶಾನದಲ್ಲಿ ನಡೆಯಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.