ಪೆರ್ನಾಜೆ ಕಂಟ್ರಮಜಲುನಲ್ಲಿ ಆನೆ ದಾಳಿ-ಕೃಷಿ ಹಾನಿ

0

ಪುತ್ತೂರು; ಪೆರ್ನಾಜೆ ಕಂಟ್ರಮಜಲು ಜೂ.16ರಂದು ರಾತ್ರಿ ಆನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿದೆ.


ಆನೆಗುಂಡಿ ಅರಣ್ಯದಿಂದ ಪೆರ್ನಾಜೆಗಾಗಿ ಕಂಟ್ರಮಜಲು ಎಂಬಲ್ಲಿಗೆ 2 ಆನೆಗಳು 1 ತಿಂಗಳಿನಿಂದ 5 ಸಲ ಬಂದು ಕೃಷಿ ನಾಶಮಾಡಿದೆ. ಜೂ.16ರಂದು ರಾತ್ರಿ ಕಂಟ್ರಮಜಲು ಭವಾನಿ ರೈಯವರ ತೋಟದಲ್ಲಿ 11 ತೆಂಗಿನ ಗಿಡಗಳು, 30 ಬಾಳೆಗಿಡಗಳನ್ನು ಆನೆ ನಾಶಮಾಡಿದೆ. ನೆರೆಯ ಪೊಂದ್ರುಕೋಡಿ, ಬಿಡಾರ, ಅಲಸಂಡೆ ಮಜಲುನಲ್ಲೂ ಆನೆ ಕೃಷಿ ಹಾನಿಮಾಡಿದೆ. ಪಿವಿಸಿ ಪೈಪ್‌ಗಳನ್ನು ಆನೆ ಹುಡಿ ಮಾಡಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here