ಪುತ್ತೂರು: ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಆಗಸ್ಟ್ ತಿಂಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ಸಿದ್ದತಾ ಸಭೆಯು ಜೂ.18ರಂದು ಪುತ್ತೂರು ಸ್ವಾಭಿಮಾನಿ ವೇದಿಕೆಯಲ್ಲಿ ನಡೆಯಿತು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಗೌರವಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಿದ್ದತಾ ಸಭೆಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ಬೇಕಾಗುವ ಸಾಮಾಗ್ರಿಗಳ ಮತ್ತು ಆಮಂತ್ರಣ ಪತ್ರ ಮುದ್ರಣ ಸಹಿತ ವಿವಿಧ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸೇವಾ ಸಮಿತಿ ಅಧ್ಯಕ್ಷ ಶುಭಮಾಲಿನಿ ಮಲ್ಲಿ, ಸಮರ್ಪಣಾ ಮಹಿಳಾ ವೇದಿಕೆಯ ಅಧ್ಯಕ್ಷೆ ಗಂಗಾರತ್ನ, ವಜ್ರಮಾತಾ ಮಹಳಾ ಘಟಕ ಒಡಿಯೂರು ಪುತ್ತೂರು ಇದರ ಅಧ್ಯಕ್ಷೆ ನಯನಾ ರೈ, ಸದಸ್ಯರಾದ ಅನ್ನಪೂರ್ಣ, ಶಾರದ ಅರಸ್, ಹರಿಣಾಕ್ಷಿ ಜೆ ಶೆಟ್ಟಿ, ಸುಜಯ ರೈ, ಪ್ರತೀಕ ಪೂರ್ಣೇಶ್, ಸ್ವರ್ಣಲತಾ ಹೆಗ್ಡೆ, ಸುಶೀಲ, ಯಮುನಾ, ತುಳಸಿ ಮಂಜುನಾಥ್, ಮಂಗಳಾ, ಸುಮಿತ್ರ, ಶಾರದ ಕೇಶವ್, ಚಿತ್ರ ಶೆಟ್ಟಿ, ಸ್ವಾಭಿಮಾನಿ ವೇದಿಕೆಯ ಗೌರವ ಸಲಹೆಗಾರ ಸಂಜೀವ ಕಲ್ಲೇಗ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಯು.ಲೋಕೇಶ್ ಹೆಗ್ಡೆ, ಹರೀಶ್ ಉಪಸ್ಥಿತರಿದ್ದರು.