ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘಕ್ಕೆ ಇವಿಎಂ ಮೂಲಕ ಚುನಾವಣೆ- ನಾಯಕಿ ಪೃಥ್ವಿ ಎಂ, ಉಪನಾಯಕಿ ರಿತಿಕಾ ಟಿ ಕೆ ಆಯ್ಕೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.

ಇವಿಎಂ ಮೂಲಕ ಮಕ್ಕಳು ಮತದಾನ ಮಾಡಿದರು. ಶಾಲಾ ನಾಯಕಿಯಾಗಿ ಪೃಥ್ವಿ ಎಂ (10ನೇ ಆ.ಮಾ), ಉಪನಾಯಕಿಯಾಗಿ ರಿತಿಕಾ ಟಿ ಕೆ (10ನೇ ಕ.ಮಾ), ಜೊತೆ ಕಾರ್ಯದರ್ಶಿಯಾಗಿ ಗಗನಾ ಡಿ (9ನೇ ಕ.ಮಾ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರ್ಷ ಯು ವಿ (9ನೇ ಆ.ಮಾ), ಕ್ರೀಡಾ ಕಾರ್ಯದರ್ಶಿಯಾಗಿ ನಿಶಾಂತ್ ಕೆ.ಜಿ (9ನೇ ಆ ಮಾ) ಸಭಾಪತಿಯಾಗಿ ಶ್ರೀಮಾ ಕೆ ಎಚ್ (10ನೇ ಆ ಮಾ), ಆಯ್ಕೆಯಾದರು. ಉಳಿದಂತೆ ವಿರೋಧ ಪಕ್ಷದ ನಾಯಕಿಯಾಗಿ ಯಶಸ್ವಿನಿ ಕೆ ವಿ (10ನೇ ಆ ಮಾ), ಶಿಸ್ತು ಪಾಲನಾ ಮಂತ್ರಿಯಾಗಿ ಕೆ ಪ್ರಣಮ್ಯ ರೈ (10ನೇ ಆ ಮಾ) ಫಾತಿಮತ್ ಫೈರೂಝ (9ನೇ ಆ ಮಾ), ನೀರಾವರಿ ಮಂತ್ರಿಯಾಗಿ ಹರ್ಷ (10ನೇ ಆ ಮಾ ), ತೇಜಸ್ ಎನ್ (9 ನೇ ಆ ಮಾ), ಆಹಾರ ಸರಬರಾಜು ಮಂತ್ರಿಯಾಗಿ ಪೃಥ್ವಿ ಬಿ ವಿ(10 ನೇ ಆ ಮಾ), ಸಾನ್ವಿಕ ಎಚ್ (9ನೇ ಆ ಮಾ), ದಿವಿನ್ ಬಿ (9ನೇ ಕ ಮಾ) ಸ್ವಚ್ಛತಾ ಪಾಲನಾ ಮಂತ್ರಿಯಾಗಿ ಕಿಶನ್ ಓ (10ನೇ ಆ ಮಾ), ಶಿಶಿರ್ ಕೆ ರೈ (9ನೇ ಆ ಮಾ), ಚರಣ್ ಕೆ (9ನೇ ಕ ಮಾ), ಆರೋಗ್ಯಮಂತ್ರಿಯಾಗಿ ತೃಪ್ತಿ ಕೂಟಾಜೆ (10 ನೇ ಆ ಮಾ ),ಗೋಶಿಕಾ ಡಿ (9ನೇ ಆ ಮಾ), ವಾರ್ತಾ ಮಂತ್ರಿಯಾಗಿ ಶ್ರಾವ್ಯ ರೈ (10 ನೇ ಆ ಮಾ), ಶ್ರೀನಿಧಿ ಎಂ ಭಟ್ ( 9 ನೇ ಆ ಮಾ), ಕೃಷಿ ಮಂತ್ರಿಯಾಗಿ ದಕ್ಷ ಎಂ ಡಿ (10 ನೇ ಆ ಮಾ) , ಅನ್ವಿತ್ ರೈ (9ನೇ ಆ ಮಾ), ಭಜನಾಮಂತ್ರಿಯಾಗಿ ಪ್ರಣಿಧಿ ಎಸ್ ಉಡುಪ (10ನೇ ಆ ಮಾ) ಜನನಿ ಎಂ ಪಿ (9ನೇ ಆ ಮಾ ) ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಪುಷ್ಪ ಬಿ ಜೆ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ , ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಮತ್ತು ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ , ಹಿರಿಯ ಶಿಕ್ಷಕಿ ಸವಿತಾ ಕೆ ಮತ್ತು ಎಲ್ಲಾ ಶಿಕ್ಷಕ ವೃಂದದದವರು ಉಪಸ್ಥಿತರಿದ್ದರು.
ಶಿಕ್ಷಕಿ ಭವಾನಿ ಸಿ, ಕಛೇರಿ ಸಿಬ್ಬಂದಿ ಸುಮನ್ ಸಹಕರಿಸಿದರು.

LEAVE A REPLY

Please enter your comment!
Please enter your name here