ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 17 ರಂದು ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಚುನಾವಣೆಯು ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ವಿವರಿಸಿ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನುಡಿದರು.
5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು. ವಿಸ್ಮಯ್ ಬಿ.ವಿ (10) ವಿದ್ಯಾರ್ಥಿ ನಾಯಕನಾಗಿ,ಲೆನೋರಾ ಸಾಂಸಿಯಾ ಪಿಂಟೋ (10) ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಕಾರ್ಯದರ್ಶಿ ಸ್ಥಾನಕ್ಕೆ ವಿಕಾಸ್ ರಾಥೋಡ್ (9), ಆಯ್ಕೆಯಾಗಿದ್ದು, ವಿರೋಧ ಪಕ್ಷದ ನಾಯಕಿಯಾಗಿ ಪಲ್ಲವಿ ಜಿ (10) ಚುನಾಯಿತರಾಗಿದ್ದಾರೆ.

ಸಹ ಶಿಕ್ಷಕರಾದ ಯೋಗಿತಾ ಕಿರಣ್, ಆಶ್ವಿನಿ, ನಿಶ್ಮಿತಾ,ಲತಾ, ಯೋಗಿತಾ ಎ, ಸುಂದರ್ ನಾವೂರ್, ಪುಷ್ಪರಾಜ್, ರಂಜಿತ್ ಮಥಾಯಿಸ್, ತೇಜ ಕುಮಾರ್ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು. ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿ ಈ ಕಾರ್ಯಕ್ರಮವನ್ನು ನಿರ್ವಹಿಸಿತ್ತು.