ಕೆಮ್ಮಾರಗುತ್ತು ಸದಾನಂದ ಶೆಟ್ಟಿಯವರ ಶೆಟ್ಟಿಯವರ ಉತ್ತರಕ್ರಿಯೆ, ನುಡಿನಮನ

0

ಉಪ್ಪಿನಂಗಡಿ: ಅಹಂ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸದಾನಂದ ಶೆಟ್ಟಿಯವರದ್ದು ಆದರ್ಶಮಯ ಬದುಕಾಗಿತ್ತು. ಬಿಎಸ್ಸೆನ್ನೆಲ್‌ನ ನಿವೃತ್ತ ಉದ್ಯೋಗಿಯಾಗಿರುವ ಇವರು ತನ್ನ ಕರ್ತವ್ಯ ನಿಷ್ಠೆಯಿಂದಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಲ್ಲದೆ, ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟ ಇವರು ಸಂಘದ ಉನ್ನತಿಗಾಗಿ ಕನಸು ಕಂಡಿದ್ದರು. ಇದಲ್ಲದೆ, ಧಾರ್ಮಿಕ ಸೇರಿದಂತೆ ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇವರ ಅಕಾಲಿಕ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ತಿಳಿಸಿದರು.
ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಜೂ.19ರಂದು ನಡೆದ ಮೃತರ ಉತ್ತರ ಕ್ರಿಯಾದಿ ಕಾರ್ಯಕ್ರಮದಲ್ಲಿ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿ, ಮಾತನಾಡಿದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ಪುತ್ತೂರು ಸುದ್ದಿ ಬಿಡುಗಡೆಯ ಸಂಪಾದಕ ಕರುಣಾಕರ ರೈ ಸಿ.ಎಚ್., ಉಪ್ಪಿನಂಗಡಿ ಬಿಎಸ್ನೆನ್ನೆಲ್ ಟೆಲಿಫೋನ್ ಎಕ್ಸ್‌ಚೇಂಚ್‌ನ ನಿವೃತ್ತ ಉದ್ಯೋಗಿಗಳಾದ ಸ್ಟೇನ್ಲಿ ಅಂದ್ರಾದೆ, ದಿವಾಕರ ರಾವ್, ಸೋಮಪ್ಪ ನಾಕ್, ಗುಮ್ಮಣ್ಣ ಗೌಡ, ತಿಮ್ಮಪ್ಪ ಗೌಡ, ಪದ್ಮನಾಭ ರಾವ್, ರಾಜಣ್ಣ, ಕುರಿಯಕೋಸ್, ಉಷಾ ಅನಿಲ್, ಕುಂಞಣ್ಣ ನಾಕ್, ರಾಮಣ್ಣ ಗೌಡ, ರತ್ನಾಕರ ಹೆಗ್ಡೆ, ಮೃತರ ಪತ್ನಿ ಉಷಾ ಎಸ್. ಶೆಟ್ಟಿ, ಪುತ್ರಿ ಶ್ರೀಮತಿ ಯುವಶ್ರೀ ಆರ್. ರೈ, ಅಳಿಯ ರಾಜೇಶ್ ರೈ, ಮೊಮ್ಮಗ ವಿಯಾನ್ಯ್ ಹಾಗೂ ಸುಶೀಲಾ ಎನ್. ರೈ, ಆನಂದ ರೈ ಮತ್ತು ಶ್ರೀಮತಿ ಸುಮಿತಾ ಎ. ರೈ, ಡಾ. ರೋಶನ್ ರೈ, ಡಾ. ಪೂಜಾಶ್ರೀ ಆರ್. ರೈ ದೇವಿನಗರ ಮಾಡಾವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here