ತೀರಾ ಹದಗೆಟ್ಟ ಆರ್ಲಪದವು ನಡುಕಟ್ಟ ರಸ್ತೆ

0

ನಿಡ್ಪಳ್ಳಿ; ಪಾಣಾಜೆ ಗ್ರಾಮದ ಆರ್ಲಪದವಿನಿಂದ ನಡುಕಟ್ಟ ಹೋಗುವ ಪರಿಶಿಷ್ಟ ಜಾತಿ ಪಂಗಡ ಕಾಲನಿ ರಸ್ತೆ ಕೆಸರು ತುಂಬಿ ತೀರಾ ಹದಗೆಟ್ಟು ಜನರು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಗೆ ಸ್ವಲ್ಪ ಮಾತ್ರ ಕಾಂಕ್ರೀಟ್ ರಸ್ತೆಯಾಗಿದ್ದು, ಸುಮಾರು ಅಂದಾಜು 500 ಮೀಟರ್ ಉದ್ದ ರಸ್ತೆ ಅಭಿವೃದ್ಧಿಯಾಗದೆ ಬಾಕಿಯಾಗಿದೆ.ಮಳೆಗಾಲದಲ್ಲಿ ನೀರು ಹರಿಯಲು ರಸ್ತೆ ಬದಿ ಚರಂಡಿಯೂ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ವಾಹನ ಸಂಚರಿಸುವಾಗ ಕೆಸರುಮಯವಾಗಿ ಜನರು ನಡೆದಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ವಿಪರೀತ ಮಳೆ ಬಂದರೆ ಶಾಲಾ ಮಕ್ಕಳಿಗೆ ಅಂದು ರಜೆಯೇ ಗತಿ ಎಂದು ಪೋಷಕರು ಹೇಳುತ್ತಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಸ್ಪಂಧಿಸಿ ಈ ರಸ್ತೆಯ ಅಭಿವೃದ್ಧಿ ಮಾಡುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here