7 ಎಎಸ್‌ಐ, 31 ಹೆಚ್.ಸಿ.,78 ಪಿಸಿಗಳ ಸಹಿತ ದ.ಕ.ಜಿಲ್ಲೆಯ 116 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

0

ಪುತ್ತೂರು:ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ವಿಟ್ಲ, ಬೆಳ್ಳಾರೆ, ಸುಬ್ರಹ್ಮಣ್ಯ ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 7 ಮಂದಿ ಎ.ಎಸ್.ಐ, 31 ಮಂದಿ ಹೆಡ್‌ಕಾನ್‌ಸ್ಟೇಬಲ್, 78 ಮಂದಿ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಆದೇಶ ಹೊರಡಿಸಿದ್ದಾರೆ.


ಜಿಲ್ಲೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಆಗಮನದ ವೇಳೆ ದ.ಕ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಬದಲಾವಣೆ ಬಗ್ಗೆ ಸಾರ್ವಜನಿಕ ಬೇಡಿಕೆ ವ್ಯಕ್ತವಾಗಿತ್ತೆನ್ನಲಾಗಿದೆ. ಈ ನಿಟ್ಟಿನಲ್ಲಿ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.


ವರ್ಗಾವಣೆಗೊಂಡಿರುವ ಎಎಸ್‌ಐಗಳು:
ಉಪ್ಪಿನಂಗಡಿ ಪೊಲೀಸ್ ಠಾಣೆಯ ಚೋಮ ಮೇರ ಪಿ.ಅವರು ಪುಂಜಾಲಕಟ್ಟೆ ಠಾಣೆಗೆ, ಬೆಳ್ಳಾರೆ ಠಾಣೆಯ ದಾಮೋದರ್ ನಾಯ್ಕ್ ಎಸ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


ಹೆಡ್‌ಕಾನ್‌ಸ್ಟೇಬಲ್‌ಗಳು:
ಸಿವಿಲ್ ಹೆಡ್ ಕಾನ್‌ಸ್ಟೇಬಲ್ ವಿಭಾಗದಲ್ಲಿ ಸುಳ್ಯ ಠಾಣೆಯಿಂದ ಪುರುಷೋತ್ತಮ ಟಿ.ಆರ್ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಸುಬ್ರಹ್ಮಣ್ಯ ಠಾಣೆಯಿಂದ ಮಹಮ್ಮದ್ ಇಕ್ಬಾಲ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ದಿವ್ಯಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ, ಉಪ್ಪಿನಂಗಡಿಯ ಹಿತೋಶ್ ಕುಮಾರ್ ಅವರು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ರಾಜು ಪೂಜಾರಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ, ಕಡಬದ ಹರೀಶ್ ಪಿ ಅವರು ವಿಟ್ಲ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ಸುಚಿನ್ ಅವರು ವಿಟ್ಲ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ರಮೇಶ್ ಬಿ ಅವರು ಪುತ್ತೂರು ಗ್ರಾಮಾಂತರಕ್ಕೆ, ಕಡಬದ ರಮೇಶ್ ಲಂಬಾಣಿ ಅವರು ಸುಳ್ಯಕ್ಕೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ವಿನಯ ಕುಮಾರ್ ಪಿ ಅವರು ವಿಟ್ಲಕ್ಕೆ, ಬಂಟ್ವಾಳದ ಗಣೇಶ್ ಪ್ರಸಾದ್ ಅವರು ಮಹಿಳಾ ಪೊಲೀಸ್ ಠಾಣೆಗೆ, ಸುಬ್ರಹ್ಮಣ್ಯದ ಆನಂದ ನಾಯ್ಕ್ ಎಸ್.ಎಮ್.ಅವರು ಕಡಬಕ್ಕೆ, ಪುತ್ತೂರು ನಗರ ಠಾಣೆಯ ಕುಂಡೋಜಿ ಬಸವರಾಜು ಅವರು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ, ಬಂಟ್ವಾಳದ ಮನೋಹರ ಅವರು ಕಡಬಕ್ಕೆ, ಬೆಳ್ತಂಗಡಿಯ ಮಧು ಕೆ.ಆರ್ ಅವರು ಸುಬ್ರಹ್ಮಣ್ಯಕ್ಕೆ, ಪುತ್ತೂರು ಗ್ರಾಮಾಂತರದ ಪ್ರವೀಣ್ ಪಿ.ಎನ್.ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


ಕಾನ್‌ಸ್ಟೇಬಲ್‌ಗಳು:
ಸುಬ್ರಹ್ಮಣ್ಯದ ಆಕಾಶ್ ಹೆಚ್.ಕೆ.ಅವರು ಸುಳ್ಯಕ್ಕೆ, ಸುಳ್ಯದ ವತ್ಸಲಾ ಕೆ ಅವರು ಪುತ್ತೂರು ಗ್ರಾಮಾಂತರಕ್ಕೆ, ಕಡಬದ ಮಂಜುನಾಥ್ ಅವರು ಸುಬ್ರಹ್ಮಣ್ಯಕ್ಕೆ, ವಿಟ್ಲದ ಶಂಕರಪ್ಪಗುಂಡಪ್ಪ ಸಮುಶಿ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಸುಳ್ಯದ ರಾಜು ಎಸ್.ಜೆ.ಅವರು ಬೆಳ್ಳಾರೆಗೆ, ಬೆಳ್ತಂಗಡಿಯ ಶಾಂತಕುಮಾರ್ ಎಮ್‌ಎಸ್ ಅವರು ಸುಬ್ರಹ್ಮಣ್ಯಕ್ಕೆ, ಕಡಬದ ವಿಠಲ್ ಬೈರಪ್ಪ ಜೊಗನ್ನವಾರ್ ಅವರು ವಿಟ್ಲಕ್ಕೆ, ಸುಳ್ಯದ ಮೇಘಾ ಕೆ.ಡಿ ಅವರು ಪುತ್ತೂರು ಗ್ರಾಮಾಂತರಕ್ಕೆ, ಸುಬ್ರಹ್ಮಣ್ಯದ ಪ್ರವೀಣ್ ಪೂಜಾರಿ ಸೆನ್ ಪೊಲೀಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ರಾಮು ಜೆ ಅವರು ವಿಟ್ಲಕ್ಕೆ, ಬೆಳ್ಳಾರೆಯ ಸುಭಾಸ್ ಕಿತ್ತೂರು ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಸುಳ್ಯದ ಹೈದರಾಲಿ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ನಗರ ಠಾಣೆಯ ಶ್ರೀಮಂತ್ ಕಾಂಬ್ಳೆ ಅವರು ಬೆಳ್ತಂಗಡಿಗೆ, ಬೆಳ್ಳಾರೆಯ ಜಗದೀಶ್ ತೊಲಸುಗುಂಡ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಕಡಬದ ಸುಮಯ್ಯ ಹಿರೇಮಠ್ ಅವರು ಸುಳ್ಯಕ್ಕೆ, ಪುತ್ತೂರು ನಗರ ಠಾಣೆಯ ಶಶಿಕುಮಾರ್ ಅವರು ಸುಳ್ಯಕ್ಕೆ, ಬೆಳ್ಳಾರೆಯ ಹರೀಶ್ ಟಿ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ನಗರ ಠಾಣೆಯ ಪ್ರಭು ನಾಯಕ್ ಅವರು ವಿಟ್ಲಕ್ಕೆ, ಪುತ್ತೂರು ನಗರ ಠಾಣೆಯಿಂದ ರವಿಕುಮಾರ್ ಎಸ್.ಆರ್ ಅವರು ಸುಳ್ಯಕ್ಕೆ, ಉಪ್ಪಿನಂಗಡಿಯ ಶಶಿಕಿರಣ್ ಅವರು ಬೆಳ್ತಂಗಡಿಗೆ, ಪುತ್ತೂರು ಗ್ರಾಮಾಂತರದ ಬಸವರಾಜು ಎಮ್ ಅವರು ಬೆಳ್ತಂಗಡಿಗೆ, ಬೆಳ್ಳಾರೆಯ ಚೇತನ್ ಕುಮಾರ್ ಎಸ್ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ಗ್ರಾಮಾಂತರದ ಪ್ರಕಾಶ್ ಅವರು ಕಡಬಕ್ಕೆ, ಪುತ್ತೂರು ನಗರದ ನಾಗರತ್ನಮ್ಮ ಅವರು ಬೆಳ್ತಂಗಡಿಗೆ, ಪುತ್ತೂರು ನಗರದ ದಿವ್ಯ ಅವರು ಮಹಿಳಾ ಪೊಲೀಸ್ ಠಾಣೆಗೆ, ಪುಂಜಾಲಕಟ್ಟೆಯ ಮೋಹನ್ ಪಿ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಮಹಿಳಾ ಠಾಣೆಯ ಚೈತ್ರ ಆರ್ ಅವರು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹರೀಶ್ ಜೆ.ಎ ಅವರು ಬೆಳ್ಳಾರೆಗೆ, ಬಂಟ್ವಾಳದ ಜಗದೀಶ್ ಆರ್ ನಾಯ್ಕ್ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಶಿವಕುಮಾರ್ ಅವರು ಬೆಳ್ಳಾರೆಗೆ, ಕಲ್ಲಪ್ಪ ರೋನಾಡ್ ಅವರು ಬೆಳ್ಳಾರೆಗೆ, ಗಂಗಾಧರ ಟಿ.ಎನ್ ಅವರು ಬೆಳ್ಳಾರೆಗೆ, ಮಗುನದಪ್ಪ ಕುರಿ ಅವರು ಕಡಬಕ್ಕೆ, ಬೆಳ್ತಂಗಡಿಯ ಅವನಾಶ್ ಚೆನ್ನಪ್ಪ ಅವರು ಕಡಬಕ್ಕೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಶಿವಕುಮಾರ್ ನರಿ ಅವರು ಉಪ್ಪಿನಂಗಡಿಗೆ, ವಿಟ್ಲದ ವಿಠಲ ಮಹಾದೇವಪ್ಪ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಬೆಳ್ತಂಗಡಿಯ ಗುಂಡೇರಾವ್ ಅವರು ಪುತ್ತೂರು ನಗರಕ್ಕೆ, ವಿಟ್ಲದ ಜತ್ತಪ್ಪ ಅವರು ಪುತ್ತೂರು ನಗರಕ್ಕೆ, ಬಂಟ್ವಾಳದ ವಿರೂಪಾಕ್ಷ ಅವರು ಪುತ್ತೂರು ನಗರಕ್ಕೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಭರತ್ ಕುಮಾರ್ ಅವರು ಪುತ್ತೂರು ನಗರಕ್ಕೆ, ಪುತ್ತೂರು ನಗರದ ಸಂತೋಷ್ ದಂಡರಗಿ ಅವರು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ನಗರದ ಸಂತೋಷ್ ಮಹಾದೇವ ಕಾಗಲೆ ಅವರು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹನುಮಂತ ನಿಂಬಲಗುಂಡಿ ಅವರು ಬಂಟ್ವಾಳಕ್ಕೆ, ಉಪ್ಪಿನಂಗಡಿಯ ಶೇಷಾದ್ರಿ ವಿ ಅವರು ಪುತ್ತೂರು ನಗರಕ್ಕೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಮನೋಜ್ ನಾಯ್ಕ್ ವಿ ಅವರು ಪುತ್ತೂರು ನಗರಕ್ಕೆ, ಕಿಶನ್ ವೈ ಅವರು ಪುತ್ತೂರು ನಗರಕ್ಕೆ, ವನೋದ್ ಚೌಹಾನ್ ಅವರು ಪುತ್ತೂರು ನಗರಕ್ಕೆ, ಬೆಳ್ತಂಗಡಿಯ ಸುನಿಲ್ ಕೆ ಕಡಬಕ್ಕೆ, ಕಡಬದ ಹರೀಶ್ ಕುಮಾರ್ ಪುತ್ತೂರು ಸಂಚಾರ ಪೊಲಿಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಮ್ಯಾಥ್ಯು ವರ್ಗೀಸ್ ಅವರು ಧರ್ಮಸ್ಥಳ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here