ಅಧ್ಯಕ್ಷ: ಚಂದ್ರಶೇಖರ ಪೆರ್ನಾಜೆ, ಕಾರ್ಯದರ್ಶಿ: ಚಂದ್ರಶೇಖರ ಕುಕ್ಕುಪುಣಿ, ಕೋಶಾಧಿಕಾರಿ: ಆನಂದ ಏರಾಜೆ
ಪುತ್ತೂರು: ಗಾಣಿಗ ಸೇವಾ ನಿರತ ಸಂಘದ ಈಶ್ವರಮಂಗಲ ಇದರ ಕಾರ್ಯಕಾರಿ ಸಮಿತಿ ಸಭೆಯು ಸಂಘದ ಅಧ್ಯಕ್ಷ ಮಹಾಲಿಂಗ ಪಂಚೋಡಿಯವರ ಅಧ್ಯಕ್ಷತೆಯಲ್ಲಿ ಜು.14ರಂದು ಹನುಮಗಿರಿ ವೈದೇಹಿ ಸಭಾಭನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಪೆರ್ನಾಜೆ, ಕಾರ್ಯದರ್ಶಿಯಾಗಿ ಚಂದ್ರಶೇಖರ ಕುಕ್ಕುಪುಣಿ, ಕೋಶಾಧಿಕಾರಿಯಾಗಿ ಆನಂದ ಏರಾಜೆ, ಗೌರವ ಅಧ್ಯಕ್ಷರಾಗಿ ಶಂಕರಿ ಟೀಚರ್, ಉಪಾಧ್ಯಕ್ಷರಾಗಿ ಮಹಾಲಿಂಗ ಕುದ್ಕಾಡಿ, ಜತೆ ಕಾರ್ಯದರ್ಶಿಯಾಗಿ ಶೈಲಜಾ ಪಲ್ಲತ್ತೂರು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಸೋಣಂಗೇರಿ, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಸಾಮೆತ್ತಡ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರದೀಪ್ ಪಟ್ಟುಮೂಲೆ, ಚಂದ್ರಕಲಾ ಸಾಮೆತ್ತಡ್ಕ, ಹರ್ಷಿತಾ ಸೋಣಂಗೇರಿ, ಕಿಶಾನ್ ನೆಕ್ರಾಜೆ, ಅಕೇಶ್ ವಜ್ರಮೂಲೆ, ಜತೆ ಸಂಘಟನಾ ಕಾರ್ಯದರ್ಶಿಯಾಗಿ ಶ್ರುತ್ಕಿರಣ್ ಹಿರಿಯಾನ ಇವರುಗಳನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಕೇಶವ ಕೋರಿಗದ್ದೆ ಕಾರ್ಯಕ್ರಮ ನಿರೂಪಿಸಿದರು.
