ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ವತಿಯಿಂದ ತುಡರ್ 15ನೇ ವರ್ಷಾಷರಣೆಯ ಅಂಗವಾಗಿ ಜೂ.22ರಂದು ಬೆಳಿಗ್ಗೆ 9.30ಕ್ಕೆ ಮದ್ಲ ತುಡರ್ ಸದನದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ತುಡರ್ ಯುವಕ ಮಂಡಲದ 15ನೇ ವರ್ಷಾಚರಣೆ ಸಲುವಾಗಿ ವಿಶ್ವ ಯೋಗ ದಿನಾಚರಣೆ ಮತ್ತು ಯುವಕ ಮಂಡಲದ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ತುಡರ್ ಕಲಾ ಸಂಘದ ಭರತನಾಟ್ಯ ತರಗತಿಯ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಎಸ್ಎಸ್ಎಲ್ಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ಮಾಡ್ನೂರು ಗ್ರಾಮದ ಎಲ್ಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ತುಡರ್ ಸದನದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರಗತಿಪರ ಕೃಷಿಕ ಶರತ್ ಕುಮಾರ್ ರೈಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರಾಟೆ ಶಿಕ್ಷಕ, ಕಾವು ಗೆಳೆಯರ ಬಳಗದ ಸಂಚಾಲಕ ನಾರಾಯಣ ಆಚಾರ್ಯ ಮಳಿಯವರು ಪುಸ್ತಕ ವಿತರಣೆ ಮಾಡಲಿದ್ದು, ಕಾವು ಬ್ಯಾಂಕ್ ಆಫ್ ಬರೋಡಾದ ಭರತೇಶ್ ಅಲಸಂಡೆಮಜಲು ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ, ಮಂಗಳೂರು ಯೋಗ ಥೆರಾಪಿ ಸೆಂಟರ್ನ ಯೋಗ ಶಿಕ್ಷಕಿ ಸುಮಾ ಆಚಾರ್ಯರವರು ಯೋಗದ ಬಗ್ಗೆ ಮಾಹಿತಿ ಮತ್ತು ಯೋಗಾಭ್ಯಾಸ ನಡೆಸಿಕೊಡಲಿದ್ದಾರೆ, ಯಕ್ಷಗಾನ ಕಲಾವಿದ ಜಯಪ್ರಕಾಶ್ ಕಲ್ಮಡ್ಕರವರು ಯಕ್ಷಗಾನ ನಾಟ್ಯ ತರಬೇತಿಯ ಮಾಹಿತಿ ನೀಡಲಿದ್ದಾರೆ ಎಂದು ಯುವಕ ಮಂಡಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.