‘ಕಾಂಗ್ರೆಸ್ ಕರ್ನಾಟಕವನ್ನು ಪಕ್ಷದ ಎಟಿಎಮ್ ಮಾಡಿದೆ’ – ರಾಜ್ಯ ಸರಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಕ್ಯಾ| ಗಣೇಶ್ ಕಾರ್ಣಿಕ್

0

ಪುತ್ತೂರು: ಅಭಿವೃದ್ಧಿ ಕಾಮಗಾರಿಯಲ್ಲೂ ಹಣದ ಬೇಡಿಕೆ. ಸರಕಾರಿ ಹುದ್ದೆಗಳು ಹರಾಜು ಮಾಡಲಾಗುತ್ತಿದೆ. ಅಷ್ಟೊಂದು ಭ್ರಷ್ಟಾಚಾರಗಳು ತುಂಬಿದೆ. ಭ್ರಷ್ಟಾಚಾರಕ್ಕೆ ಮಾನದಂಡವೇ ಕರ್ನಾಟಕ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಪಕ್ಷದ ಎಟಿಎಮ್ ಮಾಡುತ್ತಿದ್ದಾರೆ ಎಂದು ವಿಧಾನಪರಿತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಅವರು ಹೇಳಿದ್ದಾರೆ.
ಕನಾಟಕ ಸರಕಾರದಿಂದ ಜನ ವಿರೋಧಿ ನೀತಿ ಸೃಜನ ಪಕ್ಷಾಪಾತ, ಭ್ರಷ್ಟಾಚಾರ ನಡೆಸುತ್ತಿದ್ಧಾರೆಂದು ಆರೋಪಿಸಿ ಜೂ. 23ರಂದು ದ.ಕ ಜಿಲ್ಲೆಯಲ್ಲಿ ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾ.ಪಂಗಳು, ಪಟ್ಟಣ ಪಂಚಾಯತ್, ನಗರಸಭೆ ಎದುರು ಏಕಕಾಲದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಇವತ್ತು ರಾಜ್ಯದಲ್ಲಿ ಏನಾದರೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೆ ಅದು ಕೇವಲ ಕೇಂದ್ರ ಸರಕಾರದ ಅನುದಾನದ್ದು ಎಂದು ತಿಳಿದು ಕೊಳ್ಳಬೇಕು. ಸರಕಾರವು ಒಂದು ಸಮುದಾಯವನ್ನು ಒಲೈಸುವ ಕೆಲಸ ಬಿಟ್ಟರೆ ಬೇರೇನು ಮಾಡಿಲ್ಲ. ನಮ್ಮ ಮೇಲೆ ಸುಳ್ಳು ಆಪಾದನೆ ಮಾಡಿರುವ ೫೦ ಪರ್ಸೆಂಟ್, ೪೦ ಪರ್ಸೆಂಟ್ ಹೇಳಿ ಇವತ್ತು ಅವರ ಸರಕಾರದಲ್ಲಿ ಶಾಮೀಲಾಗಿರುವ ಬಿ.ಆರ್ ಪಾಟೀಲ್ ಅವರು ಲಂಚ ಕೊಟ್ಟರೆ ಮಾತ್ರ ಬಡವರಿಗೆ ಮನೆಗಳು. ಹಿರಿಯ ಶಾಸಕನ ಮಾತಿಗೆ ಬೆಲೆ ಇಲ್ಲ ಎಂಬ ವಾತಾವಣ ನಿರ್ಮಾಣ ಆಗಿದೆ. ಈ ಭ್ರಷ್ಟ ಸರಕಾರ ಯಾವ ಹಂತಕ್ಕೆ ಮುಟ್ಟಿದೆ ಎಂದರೆ ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಿಗೆ, ವಾಹನ ಸಂಚಾರಕ್ಕೆ ಬೆಲೆ ಏರಿಕೆ ಮಾಡಿದ್ದಾರೆ. ಯಾಕೆಂದರೆ ಇನ್ನು ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆ, ಪೋಸ್ಟಿಂಗ್, ಸರಕಾರದ ಕೆಲಸ ಆಗಬೇಕಾದರೆ ಹಣದ ಬೇಡಿಕೆ ಇಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ. ಸಮಾಜ ಒಡೆಯಲು ಜಾತಿಗಣತಿ ಮಾಡುವ ಮೂಳಕ ಬಂಡುತನಕ್ಕೆ ಪರಮಾವಧಿಯಾಗಿ ಸಿಧದರಾಮಯ್ಯ ಕಾಣಿಸಿಕೊಂಡಿದ್ದಾರೆ. ಸಮಾಜ ಒಡೆದು ಲಾಭ ಪಡೆಯುವ ಸರಕಾರ ಇದು ಒಂದು ರೀತಿಯ ಕೋಮುವಾದಿ ಸರಕಾರ ಆಗಿದೆ. ಕಾನೂನು ಪ್ರಕಾರ ನ್ಯಾಯ ಸಿಗಬೇಕಾದರೆ ಅದು ಬಿಜೆಯಿಂದ ಮಾತ್ರ ಸಾಧ್ಯ ಎಂದರು.


ತನ್ನ ಓಟ್ ಬ್ಯಾಂಕ್ ಗಟ್ಟಿ ಮಾಡಲು ಇರುವ ಸರಕಾರ:
ಕೇಂದ್ರ ಸರಕಾರ ಅಷ್ಟೊಂದು ಅನುದಾನ ನೀಡುತ್ತಿದ್ದರೂ ಕೇಂದ್ರ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಮೋಸ ಮಾಡಲು ಎಲ್ಲೆಲ್ಲ ಹಣ ವಸೂಲಿ ಮಾಡಲಾಗುತ್ತದೆಯೋ ಅಲ್ಲೆಲ್ಲ ವಸೂಲಿ ಮಾಡುತ್ತಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳಿಗೆ ಗ್ರ್ಯಾಚ್ಯುವಿಟಿ, ಪಿಂಚಣಿ ಹಣ ಕೊಡಲು ಸರಕಾರದಲ್ಲಿ ಹಣವಿಲ್ಲ. ಅದನ್ನು ಗ್ರಾಹಕರ ಮೂಲಕ ವಸೂಲಿ ಮಾಡುವ ಸರಕಾರಕ್ಕೆ ನಾಚಿಕೆಯಾಗಬೇಕು. ಇವತ್ತು ಮಳೆ ಹಾನಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಬರುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಸರಕಾರ ಇರುವಾಗ ಮಳೆ ಹಾನಿಗೆ ರೂ. ೫ಲಕ್ಷ ನೀಡುತ್ತಿದ್ದರು. ಈ ಕಾಂಗ್ರೆಸ್ ಸರಕಾರ ರೂ. ೧ಲಕ್ಷ ಮಾತ್ರ ನೀಡುತ್ತಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸಿದರೆ ಯಾವುದನ್ನೇ ಕೇಳದೆ ಕಿವುಡು ಸರಕಾರವಾಗಿದೆ.ಒಂದು ಸಮುದಾಯವನ್ನು ಒಲೈಕೆ ಮಾಡುವ ಮೂಲಕ ತನ್ನ ಓಟ್ ಬ್ಯಾಂಕ್ ಗಟ್ಟಿ ಮಾಡಿ ಬಹುಸಂಖ್ಯಾತ ವ್ಯಕ್ತಿಗಳಿಗೆ ಅನ್ಯಾಯ ಮಾಡುತ್ತಿದಾರೆ ಎಂದು ಕ್ಯಾ| ಗಣೇಶ್ ಕಾರ್ಣಿಕ್ ಹೇಳಿದರು.


ರಾಜ್ಯದಲ್ಲಿ ಭ್ರಷ್ಟಾಚಾರದ ನೀತಿ:
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ನೀತಿಯ ಮೂಲಕ ಅಸಹಿಷ್ಣುತಾ ಮನೋಭಾವದಲ್ಲಿ ತೊಡಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಹೊಸ ಯೋಜನೆಯನ್ನು ತಂದಿಲ್ಲ. ಈ ಹಿಂದೆ ಯಡಿಯೂರಪ್ಪ ಸರಕಾರ ಇರುವಾಗ ರೂ. ೩೦ ಕೋಟಿಗೂ ಮಿಕ್ಕಿ ಅನುದಾನ ನೀಡಿದ್ದರು. ಈಗಿನ ಸರಕಾರ ಹಿಂದಿನ ಸರಕಾರದ ನೀಡಿದ ಅನುದಾನವನ್ನೇ ಬದಲಾಯಿಸಿ ಕಾಮಗಾರಿ ನಡೆಸುತ್ತಿದ್ದಾರೆ ಹೊರತು ಈ ಹಿಂದೆ ನಗರಸಭೆಯಲ್ಲಿ ಫಲಾನುಭವಿಗಳಿಗೆ ಅನುಷ್ಠಾನ ಆಗಿರುವ ಯೋಜನೆಗೆ ಸಮಬಂಧಿಸಿ ಇನ್ನೂ ಅನುದಾನ ಒದಗಿಸಿಲ್ಲ. ಈ ಕುರಿತು ಅನೇಕ ಭಾರಿ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಫಲಾನುಭವಿಗಳಿಗೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್‌ನಲ್ಲೂ ಹಗಲು ದರೋಡೆ, ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಹಿಂದೆ ಬಿಜೆಪಿ ಸರಕಾರ ಕೊಟ್ಟ ಅನುದಾನದಲ್ಲಿ ಕೆಲಸ ಮಾಡಲಾಗುತ್ತಿದೆ. ನಗರಸಭೆಗೆ ಈ ಹಿಂದಿನ ಶಾಸಕ ಸಂಜೀವ ಮಠಂದೂರು ಅವರು ರೂ. ೪ ಕೋಟಿ ವಿಶೇಷ ಅನುದಾನ ನಗರಸಭೆ ಕಚೇರಿ ಕಟ್ಟಡಕ್ಕೆ ಮೀಸಲಿಟ್ಟಿದ್ದರು. ಅದರೆ ಈಗಿನ ಸರಕಾರ ಅದನ್ನು ಅಭಿವೃದ್ಧಿ ನೆಪದಲ್ಲಿ ಆ ಆನುದಾನ ಉಪಯೋಗಿಸಿದ್ದಾರೆ. ಸಂದೇಶ ಕೋಡುವಾಗ ಮಾತ್ರ ಕೋಟಿ ಕೋಟಿ ಅನುದಾನ ಎಂದು ಜನರಿಗೆ ಗೊಂದಲ ಮೂಡಿಸುತ್ತಿದ್ದಾರೆಂದು ಹೇಳಿದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಭಾಮಿ ಅಶೋಕ್ ಶೆಣೈ, ಜಯಂತಿ ನಾಯಕ್, ನಗರಸಭಾ ಬಿಜೆಪಿ ಸದಸ್ಯರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಜಯಲಕ್ಷ್ಮೀ ಶಗ್ರಿತ್ತಾಯ, ಯು.ಲೋಕೇಶ್ ಹೆಗ್ಡೆ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಟೌನ್ ಬ್ಯಾಂಕ್ ಉಪಾಧ್ಯಕ್ಷ ಶ್ರೀಧರ್ ಕಣಜಾಲು, ನಿರ್ದೇಶಕಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಶ್ರೀಧರ್ ಪಟ್ಲ, ಸುರೇಶ್ ಶೆಟ್ಟಿ, ಸತೀಶ್ ನಾಕ್ ಪರ್ಲಡ್ಕ, ನಗರ ಯುವ ಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಮನವಿಯಲ್ಲಿ ಏನಿದೆ..
೯೪ ಸಿ ಹಕ್ಕು ಪತ್ರಗಳಿಗೆ ಹಿಂದಿನ ಮಾದರಿಯಲ್ಲಿ ೯/೧೧ ನೀಡಬೇಕು. ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ ೧೧ ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಬೇಕು. ಪ್ಲೋಟಿಂಗ್ ಆಗದೆ ಇರುವ ಜಮೀನಿನಲ್ಲಿ ಮನೆ ಕಟ್ಟಿ ಕೊಂಡವರಿಗೆ ಮನೆ ನೀಡುವುದನ್ನು ತಡೆ ಹಿಡಿದಿರುವುದನ್ನು ತಕ್ಷಣ ನಿಲ್ಲಿಸಬೇಕು. ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆ,ಕೋಳಿ ಪಾರಂ ಇತ್ಯಾದಿಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿದಿರುವುದನ್ನು ರದ್ದುಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಲ್ಲಿನ ೧-೫ ಪ್ಲೋಟಿಂಗ್ ಆಗದಿರುವ ನೂರಾರು ಪ್ರಕರಣಗಳನ್ನು ತ್ವರಿತಗತಿಯಿ ಇತ್ಯರ್ಥಪಡಿಸಬೇಕು. ಕೃಷಿಕರಿಗೆ ನೀರಾವರಿ ಪಂಪ್‌ಸೆಟ್‌ಗಳಗೆ ಯಾವುದೇ ಸಾಮಾಗ್ರಿಗಳನ್ನು ನಿಡದೆ ಅಭಿವೃದ್ಧಿ ಶುಲ್ಕ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಕೈ ಬಿಡಬೇಕು. ಮನೆ ನಿವೇಶನ ರಹಿತರಿಗೆ ಸರಕಾರಿ ಜಮೀನು ಗುರುತಿಸಿ ಶೀಘ್ರದಲ್ಲಿ ಮನೆ ನಿವೇಶನ ನೀಡಬೇಕು. ಗ್ರಾಮೀಣ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವ ಮರಳು, ಕೆಂಪುಕಲ್ಲು ಸಾಗಾಣಿಕೆಗೆ ಶಿಸ್ತು ನಿಯಮ ಸರಳೀಕರಣಗೊಳಿಸಬೇಕು. ವೃದ್ಧಾಪ್ಯ ವೇತನ ವಿಧವಾ ವೇತನ ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ ಸೇರಿದಂತೆ ಪಿಂಚಣಿ ಸೌಲಭ್ಯಗಳ್ನು ರದ್ದುಗೊಳಿಸದೆ ಮುಂದುವರಿಸಬೇಕು. ವಿದ್ಯುತ್ ಬಿಲ್ ಮೊತ್ತದಲ್ಲಿ ನೌಕರರ ಪಿಂಚಣಿ ಶುಲ್ಕವನ್ನು ಸೇರ್ಪಡೆ ಮಾಡಿದ್ದನ್ನು ರದ್ದುಗೊಳಿಸಿ ವಿದ್ಯುತ್ ದರ ಕಡಿತಗೊಳಿಸಬೇಕು. ಮಳೆ ಹಾನಿ ಪ್ರಾಕೃತಿಕ ವಿಕೋಪ ಸೇರಿದಂತೆ ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಸಹಿತ ಸುಮಾರು ೪೦ಕ್ಕೂ ಮಿಕ್ಕಿ ಸಮಸ್ಯೆಗಳ ಪರಿಹಾರವನ್ನು ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿತ್ತು. ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ ಮನವಿ ಪತ್ರ ಸಭೆಗೆ ಮಂಡಿಸಿದರು. ಪ್ರತಿಭಟನೆ ಸಭೆಯ ಬಳಿಕ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಪೌರಾಯುಕ್ತರ ಮೂಲಕ ರಾಜ್ಯ ಪಾಲಕರಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here