ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ

0

ವಿಟ್ಲ: ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ಭಾರತೀಯ ಜನತಾ ಪಾರ್ಟಿ ವಿಟ್ಲ ಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ತೀರ್ಥರಾಮ ಗೌಡ, ಪ್ರೇಮಲತಾ ಪಟ್ಲ, ಪಂಚಾಯತ್ ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ಚಂದ್ರಾವತಿ, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕ ದಿನೇಶ್ ಕೋಡಿಬೈಲ್, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಪ್ರಮುಖರಾದ ಪದ್ಮನಾಭ ಶೆಟ್ಟಿ ಚೆಪ್ಪುಡಿಯಡ್ಕ, ಯತೀಶ್ ಬೇರಿಕೆ, ಗಿರೀಶ್ ಹಡೀಲ್, ರಾಜೇಶ್ ಪೊಯ್ಯೆ, ಪ್ರವೀಣ್ ಶೆಟ್ಟಿ, ನೇಮು ಅಗಸರಪಾಲು , ಪ್ರವೀಣ್ ಮಾಡತ್ತಡ್ಕ, ಜಗದೀಶ್ ಧರ್ಮನಗರ, ಕಿಶೋರ್ ಆಲಂಗಾರ್, ದೇವಪ್ಪ ಆಲಂಗಾರ್, ಸಂಧ್ಯಾ ಪಟ್ಲ, ವಿಶಾಲಾಕ್ಷಿ, ಚಂದ್ರಶೇಖರ ಗಿರಿನಿವಾಸ, ಪ್ರವೀಣ್ ಕಟ್ಟತ್ತಿಲ, ಆದಿತ್ಯ ಆಲಂಗಾರ್, ಬಾಲಕೃಷ್ಣ ಹಡೀಲ್, ಪ್ರವೀಣ್ ಹಡೀಲ್ , ಧನಂಜಯ ಆಲಂಗಾರ್ ಮೊದಲಾವರು ಉಪಸ್ಥಿತರಿದ್ದರು.

ಶಕ್ತಿಕೇಂದ್ರದ ನಿಕಟಪೂರ್ವ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರಿಶ್ಚಂದ್ರ ನಾಯಕ್ ವಂದಿಸಿದರು. ಶಕ್ತಿ ಕೇಂದ್ರ ಸಂಚಾಲಕ ಯಶೋಧರ ಪಟ್ಲ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಟನೆಯ ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here