ಸುಂದರ್ ರೈ ಮಂದಾರ ನಿರ್ದೇಶನದ ‘ಆನ್‌ಮಗೆ’ ತುಳು ನಾಟಕಕ್ಕೆ ಆರಿಕೋಡಿಯಲ್ಲಿ ಮುಹೂರ್ತ

0

ಪುತ್ತೂರು: ರಂಗಭೂಮಿ, ಸಿನಿಮಾ ಕಲಾವಿದ ಸುಂದರ್ ರೈ ಮಂದಾರ ನಿರ್ದೇಶಿಸಿ, ಅಭಿನಯಿಸಲಿರುವ ಅಮ್ಮ ಕಲಾವಿದೆರ್ ಕುಡ್ಲ ಅಭಿನಯದ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿರುವ, ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿರುವ ‘ ಆನ್‌ಮಗೆ’ ತುಳು ಹಾಸ್ಯಮಯ ನಾಟಕದ ಮುಹೂರ್ತವು ಜೂ.22ರಂದು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯಿತು. ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆರಿಕೋಡಿಯವರು ನಾಟಕಕ್ಕೆ ಮುಹೂರ್ತ ನೆರವೇರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ನಿರ್ದೇಶಕ ಸುಂದರ ರೈ ಮಂದಾರ ಸಹಿತಿ ಹಲವು ಮಂದಿ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು. ಈ ನಾಟಕದಲ್ಲಿ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ ಸೇರಿದಂತೆ ಹಲವು ಮಂದಿ ಕಲಾವಿದರು ಅಭಿನಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here