ನರಿಮೊಗರು ಬಿಲ್ಲವ ಗ್ರಾಮ ಸಮಿತಿ, ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿರುವ ಬಿಲ್ಲವ ಗ್ರಾಮ ಸಮಿತಿ ನರಿಮೊಗರು ಇದರ ಮಹಾಸಭೆಯು ಜೂ.22 ರಂದು ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಲ್ಲವ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.


ಸಭಾ ವೇದಿಕೆಯಲ್ಲಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್‌ ಕುಮಾರ್ ಕೆಡೆಂಜಿ, ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ‌‌ ಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ನರಿಮೊಗರು ವಲಯ ಸಂಚಾಲಕರಾದ ಹರೀಶ್ ಎಂ ಕೈಪಂಗಳದೋಳ ಉಪಸ್ಥಿತರಿದ್ದರು.


ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು‌ ದೀಪ ಬೆಳಗಿಸಿ‌ ಉದ್ಘಾಟಿಸಿ ತಮ್ಮ ಮಾತುಗಳಲ್ಲಿ ಸಂಘಟನೆಯ ಮಹತ್ವವನ್ನು ತಿಳಿಸಿ ಮುಂದಿನ ಸಾಲಿಗೆ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ಬಿಲ್ಲವ ಗ್ರಾಮ ಸಮಿತಿ ನರಿಮೊಗರು ಇದರ 2025-28 ರ ಸಾಲಿಗೆ ಅಧ್ಯಕ್ಷರಾಗಿ ಹರೀಶ್‌ ಎಂ ಕೈಪಂಗಳದೋಳ, ಉಪಾಧ್ಯಕ್ಷರಾಗಿ ಶರತ್ ಕೈಪಂಗಳದೋಳ, ಕಾರ್ಯದರ್ಶಿಯಾಗಿ ಸುಜಿತ್ ಅಂಚನ್ ದೋಳ, ಜೊತೆ ಕಾರ್ಯದರ್ಶಿಯಾಗಿ ಮೋಹನ ಶಿಬರ, ಕೋಶಾಧಿಕಾರಿಯಾಗಿ ಪ್ರಸಾದ್ ಪುರುಷರಕಟ್ಟೆ ಹಾಗೂ ನರಿಮೊಗರು ಬಿಲ್ಲವ ಮಹಿಳಾ ವೇದಿಕೆಯ ಗ್ರಾಮ ಸಮಿತಿಯ ಅಧ್ಯಕ್ಷೆಯಾಗಿ ನಮಿತಾ ಇಂದಿರಾನಗರ, ಉಪಾಧ್ಯಕ್ಷೆಯಾಗಿ ಲಕ್ಷ್ಮಿಪ್ರವೀಣ್ ಇಂದಿರಾನಗರ, ಕಾರ್ಯದರ್ಶಿಯಾಗಿ ಪೂಜಾಶ್ರೀ ಕೆ ದೋಳ ಇವರುಗಳು‌ ಆಯ್ಕೆಯಾದರು.
ಸಭೆಯಲ್ಲಿ ಗ್ರಾಮ ಸಮಿತಿ‌ಯ ಮಾಜಿ ಅಧ್ಯಕ್ಷರುಗಳು, ಸದಸ್ಯರು, ಯುವವಾಹಿನಿಯ ಪಧಾದಿಕಾರಿಗಳು ಮತ್ತು ಸದಸ್ಯರು ಸ್ವಜಾತಿ ಭಾಂಧವರು‌ ಉಪಸ್ಥಿತರಿದ್ದರು. ಅನೂಪ್ ಕುಮಾರ್ ಸ್ವಾಗತಿಸಿ‌ ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ವಂದಿಸಿದರು.

LEAVE A REPLY

Please enter your comment!
Please enter your name here