ಕಾಣಿಯೂರು: ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆಯು ಇವಿಎಂ ಮಿಷಿನ್ ಮೂಲಕ ಚುನಾವಣೆ ನಡೆಸಲಾಯಿತು. ಮುಖ್ಯಮಂತ್ರಿಯಾಗಿ ಮುಹಮ್ಮದ್ ಶಮ್ಮಸ್, ಉಪ ಮುಖ್ಯಮಂತ್ರಿಯಾಗಿ ಪವನ್ ಎ. ಟಿ ಆಯ್ಕೆಯಾದರು. ಶಾಲಾ ಮುಖ್ಯಗುರು ಜಾನಕಿ ಕೆ.ಆರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು. ಶಿಕ್ಷಕರಾದ ವೇದಾವತಿ, ಜಯಪ್ರಭಾ, ಲೋಕೇಶ್, ಸುಲತಾ, ಸಂಧ್ಯಾ ಇವರು ಸಹಕರಿಸಿದರು.
