ಪುತ್ತೂರು: ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 -26ನೇ ಸಾಲಿನ ಪ್ರಥಮ ರಕ್ಷಕ -ಶಿಕ್ಷಕರ ಸಭೆಯು ಜೂ.27ರಂದು ನಡೆಯಿತು.

ಶಾಲಾ ಸಂಚಾಲಕರು ಹಾಗೂ ಮಾಯ್ ದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ಅ.ವಂ. ಸ್ವಾಮಿ ಲಾರೆನ್ಸ್ ಮಸ್ಕರೇನಸ್ ರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕಾರದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಜವಾಬ್ದಾರಿಯ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಹುಮುಖ ವ್ಯಕ್ತಿತ್ವದ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಇವರು ಮಾತನಾಡಿ, ಮಕ್ಕಳಿಗೆ ಓದುವ, ಬರೆಯುವ, ಗ್ರಹಿಕೆಯ ಶಿಕ್ಷಣ ಮುಖ್ಯ ಇವೆಲ್ಲವನ್ನು ಮೈಗೂಡಿಸಿಕೊಂಡು, ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರದ ಕುರಿತು ತಿಳಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿ ಸೋಜ ಇವರು ಸಮಯಕ್ಕೆ ಸರಿಯಾಗಿ ಸಭಾಂಗಣ ತುಂಬಿ ,ಮಕ್ಕಳ ಪೋಷಕರು ನೆರೆದ ಸಭೆ ಶಿಕ್ಷಣದ ಮಹತ್ವಕ್ಕೆ ಸಾಕ್ಷಿಯಾದ ಸಂತೋಷವನ್ನುವ್ಯಕ್ತಪಡಿಸುತ್ತಾ, ಪ್ರಸಕ್ತ ಶೈಕ್ಷಣಿಕ ವರ್ಷದ ಮಾಹಿತಿ ಹಾಗೂ ಕಾರ್ಯ ಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಜಯಂತ ಉರ್ಲಾoಡಿ ಇವರು ಶಾಲೆಯ ಜೊತೆಗಿನ ನಿಕಟ ಬಾಂಧವ್ಯದ ಬಗ್ಗೆ ತಿಳಿಸಿ, ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಗತ ಸಭೆಯ ವರದಿಯನ್ನು ಸಹ ಶಿಕ್ಷಕಿ ಜೂಲಿಯೇಟ್ ತಾವ್ರೋ ಇವರು ಮಂಡಿಸಿದರು. ರೇಷ್ಮಾ ಇವರು ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ನೂತನ ರಕ್ಷಕ-ಶಿಕ್ಷಕರ ಸಮಿತಿಯನ್ನು ರಚಿಸಲಾಯಿತು. ಸಭೆಯ ಗಣ್ಯರಿಗೆ ಹಾಗೂ ಮಾಜಿ ಉಪಾಧ್ಯಕ್ಷರುಗಳಿಗೆ ನೆನಪಿನ ಕಾಣಿಕೆಯಾಗಿ ಹಣ್ಣಿನ ಗಿಡಗಳನ್ನಿತ್ತು ಗೌರವಿಸಲಾಯಿತು. ಸಹ ಶಿಕ್ಷಕರಾದ ಸುಬ್ಬರಾಜ ಶಾಸ್ತ್ರಿ ಇವರು ಸ್ವಾಗತಿಸಿ, ಗೌರವ ಶಿಕ್ಷಕಿ ಬಬಿತರವರು ವಂದಿಸಿದರು. ಗೌರವ ಶಿಕ್ಷಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.