ಪುತ್ತೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರು ಶಕ್ತಿ ಕೇಂದ್ರದ ಸವಣೂರು ಗ್ರಾಮದ “ಬೂತ್ ಸಮಿತಿ-66 ಮೊಗರು” ಇದರ ವತಿಯಿಂದ ಪ್ರಧಾನಿ ಮೋದಿಯವರ ” ಮನ್ ಕೀ ಬಾತ್” ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕರ್ತ ಜಗದೀಶ್ ಗೌಡ ಇಡ್ಯಾಡಿ ಇವರ ಮನೆಯಲ್ಲಿ ಆಲಿಸಿದರು.
ಈ ಸಂದರ್ಭದಲ್ಲಿ ದ.ಕ. ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ದಿನೇಶ್ ಮೆದು, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ ಮಂಡಲ ಸದಸ್ಯ ತಾರನಾಥ ಕಾಯರ್ಗ, ಬೂತ್ ಕಾರ್ಯದರ್ಶಿ ಹಿತೇಶ್ ಮೆದು, ಉಪೇಂದ್ರ ಇಡ್ಯಾಡಿ, ಕಾರ್ಯಕರ್ತರಾದ ಚೇತನ್ ಇಡ್ಯಾಡಿ, ಪವಿತ್ರ ಇಡ್ಯಾಡಿ, ಗೀತಾ ಇಡ್ಯಾಡಿ, ಮೋಕ್ಷ, ದೀಕ್ಷಾ, ಸುಶೀಲಾ ಇಡ್ಯಾಡಿ, ವಿಜಯ ಇಡ್ಯಾಡಿ, ಪ್ರಸಾದ್ ಇಡ್ಯಾಡಿ, ಮನ್ವಿತ್, ಯಕ್ಷಿತ್, ಅಶ್ವಿತ್ ಇಡ್ಯಾಡಿ, ನಳಿನಿ ಇಡ್ಯಾಡಿ, ಕೃತಿ, ದೀಕ್ಷಾ,ಸ್ವಾತಿ ಇಡ್ಯಾಡಿ, ಧ್ಯಾನ್, ಪ್ರಣವ್ ಇಡ್ಯಾಡಿ, ವರ್ಷಿತಾ ಇಡ್ಯಾಡಿ, ಬೂತ್ ಅಧ್ಯಕ್ಷ ರಾಜೇಶ್ ಇಡ್ಯಾಡಿ ಉಪಸ್ಥಿತರಿದ್ದರು.