ಬಿ.ದೇವಕಿ ಕುಳದಪಾರೆಯವರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ವಿಜೇತ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ,ಹೊಸ ಬೆಳಕು ಬಡವರ ಆಶಾಕಿರಣ ಆರ್ಲಪದವು ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಪುತ್ತೂರು ತಾಲೂಕು ಉರ್ಲಾಂಡಿ ಸುಬ್ರಾಯ ಹೆಗ್ಡೆ ಮತ್ತು ಪದ್ಮಾವತಿ ಹೆಗ್ಡೆಯವರ ಮಗಳು , ಕುಳದಪಾರೆ ಈಶ್ವರ ಹೆಗ್ಡೆಯವರ ಪತ್ನಿ ಕುಳದಪಾರೆ ಅಂಗನವಾಡಿ ಸಹಾಯಕಿಯಾಗಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ದೇವಕಿ ಕುಳದ ಪಾರೆಯವರನ್ನು ಕುಳದಪಾರೆಯ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಿ.ದೇವಕಿ ಕುಳದಪಾರೆಯವರ ಸೇವಾವಧಿಯಲ್ಲಿ ಅಂಗನವಾಡಿಗೆ ಸ್ವಚ್ಛ ಅಂಗನವಾಡಿ ಬಿರುದು ದೊರೆತಿದೆ.ಇವರ ಸೇವಾವಧಿಯಲ್ಲಿ ಅಪಾರ ಜನಮನ್ನಣೆ ಗಳಿಸಿದ್ದು ಹಲವಾರು ಸಂಘ ಸಂಸ್ಥೆಗಳು ಈಗಾಗಲೇ ಅವರನ್ನು ಸನ್ಮಾನಿಸಿ ಗೌರವಿಸಿವೆ.


ಈ ಸಂದರ್ಭದಲ್ಲಿ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ಸಮಾಜ ಸೇವಕ ನವೀನ ಸಿಟಿಗುಡ್ಡೆ ಪುತ್ತೂರು ಸ್ವಾಗತಿಸಿದರು.ಕಥಾಬಿಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕಿ ಡಾ.ಶಾಂತಾ ಪುತ್ತೂರು ಮುಖ್ಯ ಅತಿಥಿಯಾಗಿದ್ದು, ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಅತಿಥಿ ದಯಾಕರ ಹೆಗಡೆ ಬೊಳುವಾರು ಶುಭ ಹಾರೈಸಿದರು.ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಸದಸ್ಯ ಮನೋಹರ ಧನ್ಯವಾದವಿತ್ತರು. ಬಿ‌.ದೇವಕಿ ಕುಳದ ಪಾರೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here