ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 62ನೇ ಯೋಜನೆಯ ಒಂದು ದಿನದ ಸಹಾಯಧನವನ್ನು 63ನೇ ಯೋಜನೆಯ ಜೊತೆ ಸೇರಿಸಿ ಜುಲೈ ತಿಂಗಳ ಸಹಾಯಧನವನ್ನು ಪೆರ್ಲದ ನಲ್ಕ ನಿವಾಸಿ ವಿಘ್ನೇಶ್ ಇವರ ಶ್ರೀಮತಿ ಯಶೋಧ ಇವರಿಗೆ ಚಿಕಿತ್ಸೆಗಾಗಿ 25,000(ಇಪ್ಪತ್ತೈದು ಸಾವಿರ)ರೂ.ವನ್ನು ದಾನಿಗಳಿಂದ ಸಂಗ್ರಹಿಸಿ ಈ ಬಡ ಕುಟುಂಬಕ್ಕೆ ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಕಾಟುಕುಕ್ಕೆ ಮತ್ತು ಡಾ. ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶಾಂತಾ ಪುತ್ತೂರುರವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯಶೋಧರವರ ಮನೆಯವರು, ತಂಡದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.