ಕುಂಬ್ರ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಕುಂಬ್ರ ಶಾಖೆಯಲ್ಲಿ ಸ್ಥಾಪನಾ ದಿನವನ್ನು ದೀಪ ಪ್ರಜ್ವಲಿಸುವ ಮೂಲಕ ಸೆ.2ರಂದು ಆಚರಿಸಲಾಯಿತು.
ಸಂಘದ ನಿರ್ದೇಶಕರು ಮತ್ತು ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷರು ಲೋಕೇಶ್ ಚಾಕೊಟೆ,ಮಾಜಿ ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರು ಶಿವರಾಮ ಗೌಡ ಇಡ್ಯಪೆ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅದ್ಯಕ್ಷರು ಮತ್ತು ಕುಂಬ್ರ ಶಾಖೆಯ ಸಲಹಾ ಸಮಿತಿ ಸದಸ್ಯರು ನಾಗಪ್ಪ ಗೌಡ ಬೊಮ್ಮೆಟ್ಟಿ ,ಮಾಜಿ ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರು ರೇಖಾ ರಾಘವ ಗೌಡ ಕೆರೆಮೂಲೆ,ಸಲಹಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಬಸವಹಿತ್ಲು,ಶ್ರೀಧರ ಗೌಡ ಅಂಗಡಿಹಿತ್ಲು,ತಿರುಮಲೇಶ್ವರ ಗೌಡ ದೊಡ್ಡಮನೆ,ಶಾಖಾ ವ್ಯವಸ್ಥಾಪಕರಾದ ಹರೀಶ್.ವೈ,ಕಟ್ಟಡ ಮಾಲಿಕರಾದ ಪರಮೇಶ್ವರ ಗೌಡ ,ಚಿದಾನಂದ, ಸಿಬ್ಬಂದಿಗಳಾದ ಸಂಧ್ಯಾ ಕೆ, ದಿನೇಶ್ ಕುಮಾರ್ ಬಿ,ಸಂಘದ ಗ್ರಾಹಕರು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕರಾದ ಹರೀಶ್ ವೈ ಸ್ವಾಗತಿಸಿ, ವಂದಿಸಿದರು.