ಪುತ್ತೂರು: ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಈ ತಿಂಗಳಿನಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನದ ಅಧ್ಯಕ್ಷ ಮುಳಿಯ ಶಂಕರ ಭಟ್ಟರಿಗೆ ಅಳಿಕೆ ಗ್ರಾಮದ ಮುಳಿಯದಲ್ಲಿರುವ ಅವರ ಸ್ವಗೃಹದಲ್ಲಿ ಗಮಕ ಜಿಲ್ಲಾ ಸಮ್ಮೇಳನಕ್ಕೆ ಗೌರವಪೂರ್ವಕ ಆಮಂತ್ರಿಸಲಾಯಿತು.
ಹಿರಿಯ ಗಮಕಿಗಳಾದ ಪದ್ಯಾಣ ಗಣಪತಿ ಭಟ್ಟ ದಂಪತಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ, ಸದಸ್ಯರಾದ ಪ್ರೊ. ಮಹಾಲಿಂಗ ಭಟ್ ಮತ್ತು ಭವಾನಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು.