ಶರವೂರು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ರಾಮಕುಂಜ: ಆಲಂಕಾರು ಶರವೂರು ಶ್ರೀ ದುರ್ಗಾಂಬಾ ಕಲಾಸಂಗಮದ ವತಿಯಿಂದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ೧೬ನೇ ಸೇವೆಯಾಗಿ ’ವೀರ ವೈಷ್ಣವ’ ಯಕ್ಷಗಾನ ತಾಳಮದ್ದಳೆ ಅ.11ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಮುರಳೀಧರ ಕಲ್ಲೂರಾಯ, ಮೋಹನ ಶರವೂರು, ಮುಮ್ಮೆಳದಲ್ಲಿ ದಿವಾಕರ ಆಚಾರ್ಯ ಹಳೆನೇರೆಂಕಿ (ರಾವಣ), ಗೀತಾ ಕುದ್ವಣ್ಣಾಯ ಕರಾಯ, ರಾಘವೇಂದ್ರ ಭಟ್ ತೋಟಂತಿಲ (ಅತಿಕಾಯ), ನಾರಾಯಣ ಭಟ್ ಆಲಂಕಾರು (ರಾಮ), ರಾಮ್‌ಪ್ರಕಾಶ್ ಕೊಡಂಗೆ (ವಿಭೀಷಣ), ಗೋಪಾಲ ಭಟ್ ನೈಮಿಷ (ಲಕ್ಷ್ಮಣ) ಸಹಕರಿಸಿದರು. ರಕ್ಷಿತ್‌ರಾಜ್ ಕೊರಂಬಾಡಿ, ಕಾರುಣ್ಯ ರಾವ್ ಶರವೂರು ಬೆಂಗಳೂರು ಸೇವಾರ್ಥಿಗಳಾಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here