ಉಪ್ಪಿನಂಗಡಿ: 8ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿನ್ ಶಿಪ್ನಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಮಿರಾಜ್ ಆಳ್ವ ಕಟಾದಲ್ಲಿ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಪೆರ್ನೆ ದುರ್ಗಿಪಾಲ್ ಪ್ರಮೋದ್ ಆಳ್ವ ಹಾಗೂ ಕುಸುಮಾವತಿ ದಂಪತಿಯ ಪುತ್ರನಾಗಿರುವ ಇವರು 9 ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಸೆನ್ಸಾಯಿ ಮೋಹನ್ ಪೂಜಾರಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
