ಅರುಣ ಸಾರಥಿ ಸಂಘಟನೆಯಿಂದ ಆಟೋ ಚಾಲಕರೊಬ್ಬರಿಗೆ ಧನಸಹಾಯ

0

ಪುತ್ತೂರು: ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿರುವ ಪುತ್ತೂರು ತಾಲೂಕು ಬನ್ನೂರು ನಿವಾಸಿ, ಆಟೋ ಚಾಲಕ ಮೋಹನ ಎಂಬವರಿಗೆ “ಅರುಣ ಸಾರಥಿ”ಸಂಘಟನೆಯ ವತಿಯಿಂದ “ಹಿಂದವಿ”ಕಛೇರಿಯಲ್ಲಿ 10,000 ರೂಪಾಯಿ ಧನಸಹಾಯವನ್ನು ಅವರ ಮನೆಯವರಿಗೆ “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ ಸಂಚಾಲಕ ಅರುಣ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನೀಡಿದರು.


ಅನಾರೋಗ್ಯದಲ್ಲಿರುವವರಿಗೆ ಪ್ರತೀ ತಿಂಗಳಿನಂತೆ ಒಟ್ಟು 1,10,000 ರೂಪಾಯಿ “ಅರುಣ ಸಾರಥಿ” ಸಂಘಟನೆಯಿಂದ ನೀಡಲಾಗಿದೆ.ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು,ವಸಂತ ಎಚ್.ಪಿ ಗ್ಯಾಸ್,ಯಾದವ ಆರ್ವಾರ,ಸ್ವಸ್ತಿಕ್ ತಾರಿಗುಡ್ಡೆ,ಸಚಿನ್ ವಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here