ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಅಂಬೇಡ್ಕರ್ ಕ್ರೀಡಾಂಗಣ ಬಸವೇಶ್ವರ ನಗರ ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರುತಿಕ್, ಅಭಿಷೇಕ್ ಹೊಸಮನಿ ಮತ್ತು ಚಿನ್ಮಯ್ ಭಾಗವಹಿಸಿದ್ದು ಇವರಲ್ಲಿ ಅಭಿಷೇಕ್ ಹೊಸಮನಿ ಮತ್ತು ಚಿನ್ಮಯ್ ರಾಷ್ಟ್ರಮಟ್ಟದ(ಎಸ್.ಜಿ.ಎಫ್.ಐ) ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ.
