
ಪುತ್ತೂರು: ದ. 3 ರಿಂದ 6 ರತನಕ ವರೆಗೆ ತೋಟತ್ತಡ್ಕ ಬದ್ಯಾಮಾಡದಲ್ಲಿ ಶಿರಾಡಿ ದೈವದ ಪ್ರತಿಷ್ಠಾಕಲಶ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ದ. 4 ರಂದು ಸಂಜೆ ದೇವತಾ ಪ್ರಾರ್ಥನೆ, ದುರ್ಗಾಪೂಜೆ, ಸುಹಾಸಿನಿ ಆರಾಧನೆ. ಚತುರ್ಮೂರ್ತಿ ಆರಾಧನೆ, ಆಚಾರ್ಯವರಣ, ಸ್ಥಳಶುದ್ದಿ ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ಪ್ರಾಕಾರಬಲಿ, ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ನಡೆಯಿತು.
ದ. 5 ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ ಬೆಳಿಗ್ಗೆ ಗಂಟೆ 8.55ರ ಧನು ಲಗ್ನದಲ್ಲಿ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆಪುಣ್ಚಪ್ಪಾಡಿ ದಂಡಿಮಾರು ಚಾವಡಿಯಿಂದ ಭಂಡಾರವನ್ನು ತರಲಾಯಿತು. .ರಾತ್ರಿ ಅನ್ನಸಂತರ್ಪಣೆ ನಡೆಯಿತು. ದ. 6 ರಂದು ಬೆಳಿಗ್ಗೆ ಗಂಟೆ ಶಿರಾಡಿ ದೈವದ ನೇಮ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು, ಪುಣ್ಚಪ್ಪಾಡಿ ತಳಮನೆ ಮತ್ತು ತೋಟತ್ತಡ್ಕ ಹಾಗೂ ಊರ ಹತ್ತು ಸಮಸ್ತರು ಸಹಿತ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರುಗಳ ಸಹಿತ ಸಮಾರಂಭದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.