ಇಂದಿನ ಕಾರ್ಯಕ್ರಮ

24-11-2025

ಪುತ್ತೂರು ಶ್ರೀ ಸತ್ಯ ಸಾಯಿ ಮಂದಿರದಲ್ಲಿ ಬೆಳಿಗ್ಗೆ ೫.೧೫ರಿಂದ ಓಂಕಾರ ಸುಪ್ರಭಾತ, ನಗರ ಸಂಕೀರ್ತನೆ, ಮಧ್ಯಾಹ್ನ ೧೨.೩೦ರಿಂದ ವೇದ ಪಠಣ, ೧ರಿಂದ ನಾಮಸಂಕೀರ್ತನೆ, ಭಜನೆ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ, ಭಜನೆ, ಪವಮಾನಾಭಿಷೇಕ, ಮಹಾಗಣಪತಿ ಹೋಮ, ಪಂಚವಿಶಂತಿ ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಕಾರ್ತಿಕಪೂಜೆ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಂಜೆ ೪ಕ್ಕೆ ಹಸಿರು ಹೊರೆಕಾಣಿಕೆ, ೬ರಿಂದ ಭಜನಾ ಕಾರ್ಯಕ್ರಮ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೭ರಿಂದ ನೃತ್ಯೋಲ್ಲಾಸ, ೯ಕ್ಕೆ ರಂಗಪೂಜೆ, ಅನ್ನಸಂತರ್ಪಣೆ
ಶುಭಾರಂಭ
ಬೊಳುವಾರು ಹೋಟೆಲ್ ಹರಿಪ್ರಸಾದ್ ಮುಂಭಾಗ, ಶ್ರೀ ದುರ್ಗಾ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಲಿಷಿ ಪವರ್ ಸೊಲ್ಯೂಷನ್ಸ್ ಶುಭಾರಂಭ
ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕ್ಷೇತ್ರದಲ್ಲಿ ಬೆಳಿಗ್ಗೆ ೧೦ಕ್ಕೆ ಸಂಘದ ನೂತನ ಮಣ್ಣು ಪರೀಕ್ಷಾ ಕೇಂದ್ರ `ಭೂಸತ್ವ ಉದ್ಘಾಟನೆ
ಉಪ್ಪಿನಂಗಡಿ ಶೆಣೈ ಹಾಸ್ಪಿಟಲ್ ಎದುರುಗಡೆ, ರೋಯಲ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಡಿಕೆ ಜ್ಯುವೆಲ್ಲರ್‍ಸ್ ಶುಭಾರಂಭ
ವಿವಾಹದ ಔತಣಕೂಟ
ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಮಧ್ಯಾಹ್ನ ಕೊಂರ್ಬಡ್ಕಬೀಡು ಚಂದ್ರಹಾಸ ರೈಯವರ ಪುತ್ರಿ ಕೃತಿ ಮತ್ತು ಪೆರಾಲುಗುತ್ತು ರಘುನಾಥ ಶೆಟ್ಟರ ಪುತ್ರ ಸೂರಜ್‌ರವರ ವಿವಾಹದ ಔತಣಕೂಟ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯ ಕುಮಾರಧಾರ ಸಭಾಂಗಣದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬೈಲುಗುತ್ತು ಮಾರಪ್ಪ ಶೆಟ್ಟಿ ಕಡಬರವರ ಉತ್ತರಕ್ರಿಯೆ