ಇಂದಿನ ಕಾರ್ಯಕ್ರಮ

15-11-2025

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೧೦ರಿಂದ ಶ್ರೀ ಧರ್ಮಸ್ಥಳ ನೈಸರ್ಗಿಕ ಚಿಕಿತ್ಸಾ, ಯೋಗ ವಿಜ್ಞಾನ ಕಾಲೇಜಿನಿಂದ ನೈಸರ್ಗಿಕ ಚಿಕಿತ್ಸಾ ಮಾಹಿತಿ ಶಿಬಿರ
ದರ್ಬೆ ವೃತ್ತದ ಬಳಿ ಹಿಂದು ಜಾಗರಣ ವೇದಿಕೆಯಿಂದ ಸಂಜೆ ೬ಕ್ಕೆ ದೆಹಲಿಯಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯವನ್ನು ಖಂಡಿಸಿ ಪ್ರತಿಭಟನೆ
ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದಲ್ಲಿ ಮಧ್ಯಾಹ್ನ ೨ರಿಂದ ಶ್ಲೋಕ ಭಾರತೀ-ಶ್ಲೋಕ ಪಠಣದ ಸ್ಪರ್ಧೆ
ನೆಹರುನಗರ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ ೧೦ರಿಂದ ಅಂತರ್ ಜಿಲ್ಲಾ ಚೆಸ್ ಪಂದ್ಯಾಟ
ಕೊಂಬೆಟ್ಟು ಬಂಟರ ಭವನದಲ್ಲಿ ಮಧ್ಯಾಹ್ನ ೧೨.೧೫ಕ್ಕೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್, ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಸಮಾರೋಪ ಸಮಾರಂಭ
ವೀರಮಂಗಲ ಪಿಎಂಶ್ರೀ ಸ.ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೯.೩೦ರಿಂದ ಧ್ವಜವಂದನಾ, ಬಹುಮಾನ ವಿತರಣಾ ಕಾರ್ಯಕ್ರಮ, ಉಚಿತ ನೇತ್ರ ತಪಾಸಣಾ ಶಿಬಿರ, ಮಧ್ಯಾಹ್ನ ೨ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೫ರಿಂದ ಸಭಾ ಕಾರ್ಯಕ್ರಮ
ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಳಿಗ್ಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಗಳು, ಜನರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಂಚಾಯತ್ ಮಟ್ಟದಲ್ಲಿ ಹಕ್ಕೊತ್ತಾಯ ಬಗ್ಗೆ ಪೂರ್ವಭಾವಿ ಸಭೆ
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
ಕೆಮ್ಮಾಯಿ ಬಡಾವು ಕುಟುಂಬದ ಮನೆಯಲ್ಲಿ ಸಂಜೆ ೭ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ರುದ್ರಾಂಡಿ ದೈವಗಳ ಭಂಡಾರ ತೆಗೆಯುವುದು, ರಾತ್ರಿ ೮.೩೦ರಿಂದ ನೇಮೋತ್ಸವ
ಶುಭಾರಂಭ
ನೆಹರುನಗರ ಕಾಲೇಜು ಗೇಟ್ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ ೯ಕ್ಕೆ ಎಸ್.ಎಲ್.ವಿ ಬುಕ್ ಹೌಸ್‌ನ ನೂತನ ಶಾಖೆ ಶುಭಾರಂಭ, ೯.೩೦ರಿಂದ ಸ್ವರ ಸಮರ್ಪಣೆ-ಸಂಗೀತ ಕಾರ್ಯಕ್ರಮ
ಉತ್ತರಕ್ರಿಯೆ
ಬೆಳಂದೂರು ಗ್ರಾಮ ಅಮೈ ಮನೆಯಲ್ಲಿ ಮಧ್ಯಾಹ್ನ ೧೨ಕ್ಕೆ ನಾರಾಯಣ ಗೌಡ ಅಮೈಯವರ ಉತ್ತರಕ್ರಿಯೆ