ಇಂದಿನ ಕಾರ್ಯಕ್ರಮ

05-12-2025

ಬನರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ನೆಹರುನಗರ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ವಿಜ್ಞಾನಿಗಳೊಂದಿಗೆ ಸಂವಾದ, ವಿವಿಧ
ಸ್ಪರ್ಧೆ, ತಾರಾಲಯ ವೀಕ್ಷಣೆ, ಸಂಜೆ ೩.೩೦ರಿಂದ ಬಹುಮಾನ ವಿತರಣೆ
ಹಾರಾಡಿ ಸರಕಾರಿ ಮಾದರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಧ್ವಜಾರೋಹಣ, ೯.೩೦ರಿಂದ ಪ್ರತಿಭಾ ಪುರಸ್ಕಾರ, ೧೦.೩೦ಕ್ಕೆ ಸಂಗೀತ ನಿನಾದ, ೧೧ಕ್ಕೆ ಸಭಾ ಕಾರ್ಯಕ್ರಮ, ಅಪರಾಹ್ನ ೨ರಿಂದ ಗುರುವಂದನಾ-ಗೆಜ್ಜೆಪೂಜೆ, ೨.೩೦ಕ್ಕೆ ಯಕ್ಷಗಾನ-ಶತಾಕ್ಷಿ ಸರ್ವ ಮಂಗಳೆ, ಸಂಜೆ ೪.೪೫ಕ್ಕೆ ಸಾಹಸ ಪ್ರದರ್ಶನ, ೫.೧೫ಕ್ಕೆ ನಾಟ್ಯಧಾರೆ, ೭ಕ್ಕೆ ಪಿಲಿನಲಿಕೆ
ಕುಮಾರಮಂಗಲ ಪುಣ್ಚಪ್ಪಾಡಿ ಗ್ರಾಮದ ತೋಟತ್ತಡ್ಕ ಬದ್ಯಾಮಾಡದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಕಲಶಪೂಜೆ, ೮.೫೫ಕ್ಕೆ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ಪುಣ್ಚಪ್ಪಾಡಿ ದಂಡಿಮಾರು ಚಾವಡಿಯಿಂದ ಭಂಡಾರ ಬರುವುದು, ರಾತ್ರಿ ಅನ್ನಸಂತರ್ಪಣೆ
ಹಳೆನೇರಂಕಿ ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆಯ ರಾಮಮಜಲು ಗುತ್ತು ಲಕ್ಷ್ಮೀ ಕರಿಯಪ್ಪ ರೈ ರಂಗಮಂಟಪದಲ್ಲಿ ಶತಮಾನೋತ್ಸವ ಸಂಭ್ರಮ, ಬೆಳಿಗ್ಗೆ ೯ಕ್ಕೆ ಶತ ಮರವಣಿಗೆ, ವಾಹನ ಜಾಥಾ, ಹಸಿರು ಹೊರೆಕಾಣಿಕೆ ಸಂಭ್ರಮ
ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಂಜೆ ೬.೩೦ರಿಂದ “ಶ್ರೀ ತುಳಸಿ” ಯಕ್ಷಗಾನ
ಸವಣೂರು ವಿದ್ಯಾಗಂಗೋತ್ರಿ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಬೆಳಿಗ್ಗೆ ೯.೩೦ರಿಂದ ವಾರ್ಷಿಕ ಕ್ರೀಡಾಕೂಟ-ಕ್ರೀಡಾ ರಶ್ಮಿ
ಗೃಹಪ್ರವೇಶ
ರಾಮಕುಂಜ ಗ್ರಾಮದ ವಳೆಂಜದಲ್ಲಿ ನೂತನ ಮನೆ “ಸಾನಿಧ್ಯದ ಗೃಹಪ್ರವೇಶ
ಆರ್ಯಾಪು ಗ್ರಾಮದ ಕಾರ್ಪಾಡಿಯಲ್ಲಿ “ಕಾರ್ತಿಕೇಯ ನಿಲಯ”ದ ಗೃಹಪ್ರವೇಶ
ಮುಂಡೂರು ಗಾಮದ ಪೋನೋನಿಯಲ್ಲಿ ನೂತನ ಮನೆ “ಸವಿ ನಿವಾಸ”ದ ಗೃಹಪ್ರವೇಶ
ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ನೂತನ ಮನೆ “ಸಮೃದ್ಧಿ”ಯ ಗೃಹಪ್ರವೇಶ
ಶುಭವಿವಾಹ
ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಿತ್ತಡ್ಕ ದಿ| ಕಿಟ್ಟಣ್ಣ ಕುಲಾಲ್‌ರವರ ಪುತ್ರ ಅಜೇಯ್ ಮತ್ತು ಗೋಳಿಕಟ್ಟೆ ಅನಂತಾಡಿ ಅಣ್ಣು ಮೂಲ್ಯರ ಪುತ್ರಿ ಅಶ್ವಿತಾರವರ ವಿವಾಹ
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿರುವ ಶ್ರೀ ಗಣೇಶ ಕಲಾಮಂದಿರದಲ್ಲಿ ಮೂಡುಶೆಡ್ಡೆ ಭಂಡಾರದಮನೆ ದಿ| ನೆಲ್ಲಿಕಟ್ಟೆ ಸುಧಾಕರ ಶೆಟ್ಟಿಯವರ ಪುತ್ರ ಅಭಿಜಿತ್ ಮತ್ತು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಬೀದಿಶಾಲೆಮನೆ ಪಡುಬೆಟ್ಟು ಬಿ. ದಾಮೋದರ್‌ರವರ ಪುತ್ರಿ ಬಿ. ಅರ್ಚನಾರವರ ವಿವಾಹ
ದರ್ಬೆ ಬೈಪಾಸ್ ರಸ್ತೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಗ್ರಾಮದ ಜತ್ತಿಬೆಟ್ಟು ಹೊನ್ನಪ್ಪ ಗೌಡರ ಪುತ್ರ ಮನೋಜ್ ಮತ್ತು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಬೊಳ್ಳರಮಜಲು ಪದ್ಮನಾಭ ಗೌಡರ ಪುತ್ರಿ ಗುಣಶ್ರೀಯವರ ವಿವಾಹ
ಪರ್ಪುಂಜ ಅಬ್ರೋಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ಕುತ್ಯಾಡಿ ವಿಶ್ವನಾಥ ರೈಯವರ ಪುತ್ರ ಡಾ| ಅನೂಪ್‌ಕೃಷ್ಣ ರೈ ಮತ್ತು ಬೋಳಂಕುಡ್ಲು ಜಗದೀಶ ರೈಯವರ ಪುತ್ರಿ ಪ್ರತೀಕ್ಷಾ ಜೆ. ರೈಯವರ ವಿವಾಹ
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಡಬ ತಾಲೂಕು ಕುದ್ಮಾರು ಗ್ರಾಮದ ನಡುಮನೆ ದೇವಪ್ಪ ಗೌಡರ ಪುತ್ರ ತೇಜ್‌ಕುಮಾರ್ ಎನ್. ಮತ್ತು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಎರ್ಮಾಯಿಲ್ ದಿ| ರಾಘವ ಗೌಡರ ಪುತ್ರಿ ಮಧುಶ್ರೀಯವರ ವಿವಾಹ
ಮುಕಂಪಾಡಿ ಸುಭದ್ರಾ ಸಭಾ ಮಂದಿರದಲ್ಲಿ ಕಡಬ ತಾಲೂಕು ಕಾಣಿಯೂರು ಗ್ರಾಮದ ತೋಟ ವಾಸುದೇವ ನಾಕರ ಪುತ್ರಿ ಚಂದ್ರಿಕಾ (ಜಾಹ್ನವಿ) ಮತ್ತು ಬಂಟ್ವಾಳ ಲೂಕು ಪೆರಾಜೆ ಗ್ರಾಮದ ಅಶ್ವತ್ಥಾಡಿ ಪಾಂಡು ನಾಕರ ಪುತ್ರ ಯಾದವರವರ ವಿವಾಹ
ಕಟೀಲು ಗ್ರ್ಯಾಂಡ್ ಕಟೀಲು ಸಭಾಂಗಣದಲ್ಲಿ ಗಣೇಶ್ ರೈ ಬೂಡಿಯಾರುರವರ ಪುತ್ರ ಗೌತಮ್ ಮತ್ತು ಕಾಂತಾಡಿಗುತ್ತು ಬರಂಗರೆ ನಿತ್ಯಾನಂದ ಹೆಗ್ಡೆಯವರ ಪುತ್ರಿ ಕೃತಿಕಾರವರ ವಿವಾಹ
ಕಟೀಲು ಸೌಂದರ್ಯ ಪ್ಯಾಲೇಸ್‌ನಲ್ಲಿ ಅಮೈ ನಡ್ಯೇಲು ಜಗನ್ನಾಥ ಶೆಟ್ಟಿಯವರ ಪುತ್ರ ಡಾ| ಅಭಿಷೇಕ್ ಮತ್ತು ಪಡುಮಠ ದಿನೇಶ ಶೆಟ್ಟಿಯವರ ಪುತ್ರಿ ಡಾ| ಶ್ರೇಯಾರವರ ವಿವಾಹ
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿ ಶಂಕರ ಸಭಾಭವನದಲ್ಲಿ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕಾಯರುಮೊಗರು ದಿ| ತುಕ್ರಪ್ಪ ಗೌಡರ ಪುತ್ರ ನವೀನ ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮಜಲು ಶೇಖರ ಗೌಡರ ಪುತ್ರಿ ಲೋಲಾಕ್ಷಿಯವರ ವಿವಾಹ