ಇಂದಿನ ಕಾರ್ಯಕ್ರಮ

18-09-2025

ಪುತ್ತೂರು ಸ್ಕಿನ್ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯ರಿಂದ ೮ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ಉಚಿತ ಚರ್ಮ ತಪಾಸಣಾ ಶಿಬಿರ, ರಕ್ತದ ಅಲರ್ಜಿ ಪರೀಕ್ಷೆ
ಪುತ್ತೂರು ಜಿ.ಎಲ್. ವನ್ ಮಾಲ್ ಒಂದನೇ ಮಹಡಿಯಲ್ಲಿ ಸಂಜೆ ೫ರಿಂದ ಸುವಿಚಾರ ಬಳಗ ಪುತ್ತೂರು, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಗಳು ಪುತ್ತೂರು ವತಿಯಿಂದ ತನಿಖಾ ವರದಿ ಮಾಡುವ ಪತ್ರಕರ್ತರು ಎದುರಿಸುವ ಸವಾಲುಗಳು ವಿಷಯದ ಕುರಿತು ಪತ್ರಕರ್ತ ಪಾರ್ವತೀಶ ಬಿಳಿದಾಳೆಯವರಿಂದ ಉಪನ್ಯಾಸ-ಸಂವಾದ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಲೈವ್ ಅವತಾರ್ ಶೋ-ಪುತ್ತೂರು ಉತ್ಸವ ಪ್ರಾರಂಭ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎದುರು ಬೆಳಿಗ್ಗೆ ೧೧ಕ್ಕೆ ಒಮ್ನಿ ಕಾರು, ದ್ವಿಚಕ್ರ ವಾಹನ ಹರಾಜು
ನೆಲ್ಯಾಡಿ ಪಿಎಂಶ್ರೀ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ ೨ರಿಂದ ಶಾಲೆಯ ೭೫ನೇ ವರ್ಷಾಚರಣೆಯ ಸಮಿತಿ ರಚನೆಯ ಸಮಾಲೋಚನಾ ಸಭೆ
ನಿಡ್ಪಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆವರಣದಲ್ಲಿ ಬೆಳಿಗ್ಗೆ ೧೦ಕ್ಕೆ ಸಾಮಾನ್ಯ ಸಭೆ
ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಡ್ಯ-ಕೊಣಾಜೆ ಗ್ರಾ.ಪಂನ ಗ್ರಾಮಸಭೆ
ಕೊಂಬಾರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಾರ್ಷಿಕ ಸಾಮಾನ್ಯ ಸಭೆ
ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ೫.೩೦ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ೩೪ನೇ ವರ್ಷದ ತಿರುಗಾಟ ಪಾರಿಜಾತ ನರಕಾಸುರ ಮೋಕ್ಷ ರಕ್ತರಾತ್ರಿ
ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಜೈ ಗುರುದೇವ್, ಆರ್ಟ್ ಆಫ್ ಲೀವಿಂಗ್ ಪುತ್ತೂರು ವತಿಯಿಂದ “ದಿವ್ಯ ಸಮಾಜ ನಿರ್ಮಾಣ ಶಿಬಿರ”
ಉತ್ತರಕ್ರಿಯೆ
ಪುತ್ತೂರು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಮಧ್ಯಾಹ್ನ ೧೨ಕ್ಕೆ ಕೆಮ್ಮಾಯಿ ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾಣ್ಣ)ರವರ ಉತ್ತರಕ್ರಿಯೆ