06-12-2025
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಎಳ್ಳೆಣ್ಣೆ ಅಭಿಷೇಕ
ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಅಪರಾಹ್ನ ೩.೩೦ಕ್ಕೆ ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿಯ ೨೧ನೇ ವರ್ಷದ ಮಹಾಸಭೆ, ವಾರ್ಷಿಕೋತ್ಸವ
ನೆಹರುನಗರ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಬೆಳಿಗ್ಗೆ ೯.೩೦ಕ್ಕೆ ಚಿಣ್ಣರ ಚಿತ್ತಾರ ಉದ್ಘಾಟನೆ, ತಾರಾಲಯ ವೀಕ್ಷಣೆ, ಮಧ್ಯಾಹ್ನ ೨.೩೦ರಿಂದ ಚಿಣ್ಣರ ಸಾಧನ ಸನ್ಮಾನ
ಹಾರಾಡಿ ಸರಕಾರಿ ಮಾದರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯.೩೦ರಿಂದ ಪ್ರತಿಭಾ ಪುರಸ್ಕಾರ, ಅಪರಾಹ್ನ ೧.೪೫ಕ್ಕೆ ಚಿಣ್ಣರ ಚಿಲಿಪಿಲಿ, ೨ರಿಂದ “ಕಲೋತ್ಕರ್ಷ-ಸಾಂಸ್ಕೃತಿಕ ವೈವಿಧ್ಯ, ರಾತ್ರಿ ೮.೩೦ಕ್ಕೆ “ದಿ ಎಂಪರರ್ಸ್ ನ್ಯೂ ಕ್ಲೋತ್ಸ್-ಇಂಗ್ಲೀಷ್ ನಾಟಕ
ದರ್ಬೆ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦.೩೦ರಿಂದ ರೋಟರಿ ಕ್ಲಬ್ ಪುತ್ತೂರು ಈಸ್ಟ್ನಿಂದ ರೋಟರಿ ಜಿಲ್ಲಾ ಕ್ರೀಡಾಕೂಟ ಖೇಲ್ ಮಿಲನ್
ಹಳೆನೇರಂಕಿ ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆಯ ರಾಮಮಜಲು ಗುತ್ತು ಲಕ್ಷ್ಮೀ ಕರಿಯಪ್ಪ ರೈ ರಂಗಮಂಟಪದಲ್ಲಿ ಬೆಳಿಗ್ಗೆ ೯ಕ್ಕೆ ಶತ ಸಂಭ್ರಮ ಧ್ವಜಾರೋಹಣ, ೧೦ಕ್ಕೆ ಉದ್ಘಾಟನೆ, ಸನ್ಮಾನ ಸಮಾರಂಭ, ಅಪರಾಹ್ನ ೧.೩೦ಕ್ಕೆ ನೃತ್ಯ ಕಲರವ, ನೃತ್ಯ ವೈಭವ, ಸಂಜೆ ೫.೩೦ಕ್ಕೆ ಪುಟಾಣಿ ಸಂಭ್ರ್ರಮ, ಬೇಲಿ ದೆವ್ವ, ಗೋಕುಲ ನಿರ್ಗಮನ
ಬಡಗನ್ನೂರು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಠಾರದಲ್ಲಿ ಸಂಜೆ ೬ರಿಂದ “ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ೯.೩೦ರಿಂದ ವಾರ್ಷಿಕೋತ್ಸವ, ಬೆಳಿಗ್ಗೆ ೯.೩೦ಕ್ಕೆ ಧ್ವಜ ವಂದನೆ, ೧೦ಕ್ಕೆ ಛದ್ಮವೇಷ ಸ್ಪರ್ಧೆ, ಸಂಜೆ ೫.೩೦ರಿಂದ ಸಭಾ ಕಾರ್ಯಕ್ರಮ, ೭ರಿಂದ ಮನರಂಜನಾ ಕಾರ್ಯಕ್ರಮ
ಕರೋಪಾಡಿ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಕುಮಾರಮಂಗಲ ಪುಣ್ಚಪ್ಪಾಡಿ ಗ್ರಾಮದ ತೋಟತ್ತಡ್ಕ ಬದ್ಯಾಮಾಡದಲ್ಲಿ ಬೆಳಿಗ್ಗೆ ೮.೩೦ರಿಂದ ಶಿರಾಡಿ ದೈವದ ನೇಮ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ
ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಬೆಳಿಗ್ಗೆ ೭.೩೦ರಿಂದ ಗಣಪತಿ ಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಶ್ವರಿ ತಂಬಿಲ, ೯.೩೦ರಿಂದ ಶ್ರೀ ಸತ್ಯನಾರಾಯಣ ಪೂಜೆ, ೧೧.೩೦ರಿಂದ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಂಜೆ ೫ರಿಂದ ಭಜನಾ ಸಂಕೀರ್ತನೆ, ಕುಣಿತ ಭಜನೆ, ರಾತ್ರಿ ೧೦ರಿಂದ ಅನ್ನಸಂತರ್ಪಣೆ
ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ವಠಾರದಲ್ಲಿ ಮಗ್ರಿಬ್ ನಮಾಜಿನ ಬಳಿಕ ಮಜ್ಲಿಸುನ್ನೂರ್, ಏರ್ವಾಡಿ ಮಜ್ಲಿಸ್
ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಸರ್ವೋದಯ ಕ್ರೀಡಾ ಸಿಂಚನ
ಶುಭಾರಂಭ
ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್ನಲ್ಲಿ ಬೆಳಿಗ್ಗೆ ೧೧ಕ್ಕೆ ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನೆ
ಅನಂತಾಡಿ ಗ್ರಾಮದ ಆರಂಗಳದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಅನಂತಾಡಿ ಗ್ರಾ.ಪಂ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಲೋಕಾರ್ಪಣೆ
ವಿವಾಹದ ಔತಣಕೂಟ
ತುಂಬೆ (ಬ್ರಹ್ಮರಕೂಟ್ಲು) ವಳವೂರು ಬಂಟ್ವಾಳದ ಬಂಟರ ಭವನ “ಪಿ. ವಿ. ಶೆಟ್ಟಿ ಅಡಿಟೋರಿಯಂ”ನಲ್ಲಿ ಮೂಡುಶೆಡ್ಡೆ ಭಂಡಾರದಮನೆ ದಿ| ನೆಲ್ಲಿಕಟ್ಟೆ ಸುಧಾಕರ ಶೆಟ್ಟಿಯವರ ಪುತ್ರ ಅಭಿಜಿತ್ ಮತ್ತು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಬೀದಿಶಾಲೆಮನೆ ಪಡುಬೆಟ್ಟು ಬಿ. ದಾಮೋದರ್ರವರ ಪುತ್ರಿ ಬಿ. ಅರ್ಚನಾರವರ ವಿವಾಹದ ಔತಣಕೂಟ
ಮಂಗಳೂರು ಟಿ. ಎಮ್. ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ರಾತ್ರಿ ಗಣೇಶ್ ರೈ ಬೂಡಿಯಾರುರವರ ಪುತ್ರ ಗೌತಮ್ ಮತ್ತು ಕಾಂತಾಡಿಗುತ್ತು ಬರಂಗರೆ ನಿತ್ಯಾನಂದ ಹೆಗ್ಡೆಯವರ ಪುತ್ರಿ ಕೃತಿಕಾರವರ ವಿವಾಹದ ಔತಣಕೂಟ
ಮಂಗಳೂರು ಅಡ್ಯಾರ್ ಗಾರ್ಡನ್ ವಿ. ಕೆ. ಶೆಟ್ಟಿ ಆಡಿಟೋರಿಯಂನಲ್ಲಿ ರಾತ್ರಿ ಅಮೈ ನಡ್ಯೇಲು ಜಗನ್ನಾಥ ಶೆಟ್ಟಿಯವರ ಪುತ್ರ ಡಾ| ಅಭಿಷೇಕ್ ಮತ್ತು ಪಡುಮಠ ದಿನೇಶ ಶೆಟ್ಟಿಯವರ ಪುತ್ರಿ ಡಾ| ಶ್ರೇಯಾರವರ ವಿವಾಹದ ಔತಣಕೂಟ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶಕ್ತಿ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಇಳಂತಾಜೆ ಪದ್ಮನಾಭ ರೈಯವರ ಉತ್ತರಕ್ರಿಯೆ


