13-11-2025
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೧೦ರಿಂದ ಶ್ರೀ ಧರ್ಮಸ್ಥಳ ನೈಸರ್ಗಿಕ ಚಿಕಿತ್ಸಾ, ಯೋಗ ವಿಜ್ಞಾನ ಕಾಲೇಜಿನಿಂದ ನೈಸರ್ಗಿಕ ಚಿಕಿತ್ಸಾ ಮಾಹಿತಿ ಶಿಬಿರ
ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿ ತರಬೇತಿ
ಕೆಮ್ಮಾಯಿ ಬಡಾವು ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೯.೪೦ಕ್ಕೆ ಶ್ರೀ ರುದ್ರಾಂಡಿ ಧರ್ಮದೈವದ ಪ್ರತಿಷ್ಠೆ ಕಾರ್ಯ
ಶುಭವಿವಾಹ
ಪುತ್ತೂರು ದರ್ಬೆ ಬೈಪಾಸ್ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಸವಣೂರು ಕೆಡೆಂಜಿ ದಿ| ಕಿಟ್ಟಣ್ಣ ಶೆಟ್ಟಿಯವರ ಪುತ್ರ ದೀಕ್ಷಿತ್ ಕುಮಾರ್ ಶೆಟ್ಟಿ ಮತ್ತು ನಾವೂರು ದಿ| ವಿಠಲ ಶೆಟ್ಟಿಯವರ ಪುತ್ರಿ ಚೈತ್ರಾರವರ ವಿವಾಹ
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ಮಲ್ಯ ಶಂಕರನಾರಾಯಣ ಭಟ್ಟರ ಪುತ್ರಿ ರಂಜಿತಾ ಮತ್ತು ಬೆಂಗಳೂರು, ಕಾಡೂರು ಬಾಲಕೃಷ್ಣ ಭಟ್ಟರ ಪುತ್ರ ಅಜಯ್ ಭಾರದ್ವಾಜ್ರವರ ವಿವಾಹ
ವೈಕುಂಠ ಸಮಾರಾಧನೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಈಶ್ವರಿ ರಾಜೇಂದ್ರ ರೈ ಅಜಲಾಡಿಬೀಡುರವರ ವೈಕುಂಠ ಸಮಾರಾಧನೆ



