19-05-2025
ಟಕುಡಿಪ್ಪಾಡಿ ಅರ್ಕ ಶ್ರೀ ನಾಗದೇವರು, ರಕ್ತೇಶ್ವರಿ, ಶ್ರೀ ಮಲರಾಯ ಧೂಮಾವತಿ, ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪೂಜೆ, ತಿಲ ಹೋಮ, ನಾಗದೇವರು, ರಕ್ತೇಶ್ವರಿ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ
ಬೆಂಗಳೂರು ಸೌಂದರ್ಯ ನಗರ, ೧೨ನೇ ಕ್ರಾಸ್ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ೬.೩೦ರಿಂದ ಮೂಲಬಿಂಬ ಪ್ರತಿಷ್ಠೆ, ಪ್ರತಿಷ್ಠಾಹೋಮ, ಸ್ವಾಮೀಜಿಗಳ ಆಗಮನ, ಸಂಜೆ ೪ರಿಂದ ಸಭಾ ಕಾರ್ಯಕ್ರಮ, ೬ರಿಂದ ಶ್ರೀ ಭೂ ದುರ್ಗ ನಮಸ್ಕಾರ ಪೂಜೆ
ಗೃಹಪ್ರವೇಶ
ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಕಜೆಯಲ್ಲಿ ನೂತನ ಮನೆ ‘ಸುಮಗಿರಿ’ಯ ಗೃಹಪ್ರವೇಶ, ಸಂಜೆ ೬ರಿಂದ ದುರ್ಗಾಪೂಜೆ
ಕುದ್ಮಾರು ಗ್ರಾಮದ ಪಟ್ಟೆಯಲ್ಲಿ ನೂತನ ಮನೆ ‘ಶ್ರೀದೇವಿ ನಿಲಯ’ದ ಗೃಹಪ್ರವೇಶ
ಬ್ರಹ್ಮೋಪದೇಶ
ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಉದ್ಯಾವರ (ಪುತ್ತೂರು) ಚಿತ್ರಾಂಗಿನಿ ಮತ್ತು ಸತ್ಯಪ್ರಕಾಶ್ ಆಚಾರ್ಯರವರ ಪುತ್ರ ಕಮಲೇಶ್(ಕರಣ್) ನಿಗೆ ಬ್ರಹ್ಮೋಪದೇಶ
ಕೊಂಡಪ್ಪಾಡಿ ಶ್ರೀ ಕ್ಷೇತ್ರ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ಮುಚ್ಚಿಂತ್ತಾಯ ಪ್ರೇಮಲತಾ ಮತ್ತು ರಾಮಶಂಕರ ಮುಚ್ಚಿಂತ್ತಾಯರ ಪುತ್ರ ಅನಂತೇಶನಿಗೆ ಬ್ರಹ್ಮೋಪದೇಶ
ಶುಭಾರಂಭ
ಕೋಡಿಂಬಾಡಿ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ ೯ಕ್ಕೆ ಕುದ್ಕೋಳಿ ಫೂಯೆಲ್ಸ್ ಶುಭಾರಂಭ
ಶುಭವಿವಾಹ
ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ಪುತ್ತೂರು ತಾಲೂಕು ಬನ್ನೂರು ಕರ್ಮಲ ವಿನೋದರವರ ಪುತ್ರ ಪವನ್ ಕುಮಾರ್ ಮತ್ತು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ವಿಠಲ್ ನಾಕ್ರವರ ಪುತ್ರಿ ಶ್ರೀರಕ್ಷರವರ ವಿವಾಹ
ಪುತ್ತೂರು ಎಪಿಎಂಸಿ ರೈತ ಸಭಾ ಭವನದಲ್ಲಿ ಪುತ್ತೂರು ತಾಲೂಕು ಚಿಕ್ಕಪುತ್ತೂರು ಲಿಂಗಪ್ಪ ಮಡಿವಾಳರ ಪುತ್ರ ಪ್ರತೀಕ್ ಮತ್ತು ಚೆಟ್ಟಿಮಾನಿ ದಿ| ಬಾಲಕೃಷ್ಣ ಸಾಲಿಯಾನ್ರವರ ಪುತ್ರಿ ಕಾವ್ಯಶ್ರೀಯವರ ವಿವಾಹ
ಕುಕ್ಕುಜಡ್ಕ ಅಮರ ಸಹಕಾರ ಸೌಧ ಸಭಾಂಗಣದಲ್ಲಿ ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ ರೇವತಿ ಮತ್ತು ಆನಂದ ಗೌಡರ ಪುತ್ರಿ ಪೂಜಾ (ಪ್ರೀತಿ) ಮತ್ತು ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಹಿರಿಯಡ್ಕ ಕೊಂಡೆಬಾಯಿ ಕಮಲಾಕ್ಷಿ ಮತ್ತು ತಿಮ್ಮಪ್ಪ ಗೌಡರ ಪುತ್ರ ಕಿರಣ್ ರಾಜ್ರವರ ವಿವಾಹ
ನರಿಮೊಗರು, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕಲ್ಲರ್ಪೆ ಗೋವಿಂದ ನಾಯ್ಕರ ಪುತ್ರ ಸತೀಶ್ ಮತ್ತು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಜಂಗಮುಗೇರು ಕೊರಗಪ್ಪ ನಾಯ್ಕರ ಪುತ್ರಿ ಪ್ರಿಯರವರ ವಿವಾಹ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕೆದಂಬಾಡಿಗುತ್ತು ದಿ| ಶೀನಪ್ಪ ರೈಯವರ ಪುತ್ರ ಬಾಲಚಂದ್ರ ರೈ ಮತ್ತು ಉಜಾರು ಕೆರೆಮನೆ ನಾರಾಯಣ ಭಂಡಾರಿಯವರ ಪುತ್ರಿ ಕಾವ್ಯರವರ ವಿವಾಹ ಹಾಗೂ ಕಂದೂರು ಸಜೀಪಮೂಡ ಮೆಲ್ಕಾರ್ ‘ಬಜಾರ್ ಆಡಿಟೋರಿಯಂ’ನಲ್ಲಿ ಔತಣಕೂಟ
ತುಂಬೆ ವಳವೂರು ಬಂಟವಾಳದ ಬಂಟರ ಭವನದಲ್ಲಿ ಮೇರಮಜಲುಗುತ್ತು ಉಮಾ ರೈ ಮತ್ತು ಪುಣಚ ನಡುಮನೆ ಮಾಯಿಲಪ್ಪ ರೈಯವರ ಪುತ್ರ ಸುದರ್ಶನ್ ಮತ್ತು ಶಿರ್ವ ನ್ಯಾರ್ಮ ಸುಧಾಕರ ಶೆಟ್ಟಿ ಮತ್ತು ತಾಳಿಪಾಡಿಗುತ್ತು ಆಶಾ ಶೆಟ್ಟಿಯವರ ಪುತ್ರಿ ಐಶ್ವರ್ಯರವರ ವಿವಾಹ
ಪರ್ಪುಂಜ ಅಬ್ರಾಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ತೊಟ್ಲ ಪ್ರಭಾವತಿ ಮತ್ತು ಜಯರಾಮ್ ರೈಯವರ ಪುತ್ರ ಪ್ರಜನ್ ಮತ್ತು ಸರೋಳಿ ವಿಜಯ್ ಕುಮಾರ್ ರೈಗಳ ಪುತ್ರಿ ವಿಲಾಸಿನಿಯವರ ವಿವಾಹದ ಔತಣಕೂಟ
ಉತ್ತರಕ್ರಿಯೆ
ಚಾರ್ವಾಕ ಗ್ರಾಮದ ನಡುಬೈಲು ಸ್ವಗೃಹದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಕುಂಞಣ್ಣ ನಡುಬೈಲುರವರ ಉತ್ತರಕ್ರಿಯೆ