ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸೋಸಿಯೇಶನ್ ರಿಯಾದ್; ಗೌರವಾಧ್ಯಕ್ಷರಾಗಿ ಖಾದರ್ ಚೆಡವು, ಅಧ್ಯಕ್ಷ: ನೌಫಲ್ ಚೆಡವು ಕಾರ್ಯದರ್ಶಿ: ಅರ್ಷದ್ ಅರಿಗೆಮಜಲ್ ಆಯ್ಕೆ

0

ಪುತ್ತೂರು: ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಇದರ 2022-23ನೇ ಸಾಲಿನ ವಾರ್ಷಿಕ ಸಭೆ ರಿಯಾದ್‌ನ ಶಿಫಾ ಸಣಯ್ಯದ ಅನಸ್ ಹೌಸ್‌ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶ್ರಫ್ ಬಿ.ಸಿ ಮಾತನಾಡಿ ಸಮಿತಿಯು ಕಳೆದ 24 ವರ್ಷಗಳಿಂದ ಕಾರ್ಯಾಚರಿಸಿದ್ದು ಊರಿನ ಅಭಿವೃದ್ಧಿ ಕಾರ್ಯಗಳಿಗೆ, ಬಡ ಅನಾಥ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಹಾಗೂ ಇನ್ನಿತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಹಾಯ ನೀಡುತ್ತಾ ಬಂದಿದೆ ಎಂದು ಹೇಳಿದರು. ಬಷೀರ್ ಚೆನ್ನಾರ್ ವಾರ್ಷಿಕ ವರದಿ ಮಂಡಿಸಿದರು.

ನಂತರ ನೂತನ ಸಮಿತಿ ರಚಸಲಾಯಿತು. ಗೌರವಾಧ್ಯಕ್ಷರಾಗಿ ಖಾದರ್ ಚೆಡವು, ಅಧ್ಯಕ್ಷರಾಗಿ ನೌಫಲ್ ಚೆಡವು, ಕಾರ್ಯದರ್ಶಿಯಾಗಿ ಅರ್ಷದ್ ಅರಿಗೆಮಜಲ್, ಉಪಾಧ್ಯಕ್ಷರಾಗಿ ಹನೀಫ್ ಕಡಬ, ಕೋಶಾಧಿಕಾರಿಯಾಗಿ ಶಾಫಿ ಚಾಪಳ್ಳ, ಜೊತೆ ಕಾರ್ಯದರ್ಶಿಯಾಗಿ ಯಾಸಿರ್ ತುಂಬೆ ಆಯ್ಕೆಯಾದರು.

ಸಭೆಯಲ್ಲಿ ಬಷೀರ್ ಚೆಡವು, ಫಾರೂಕ್ ಕೊಡಿಪ್ಪಾಡಿ, ಕಲಂದರ್ ಅತ್ತಿಕರೆ, ಅಬ್ಬಾಸ್ ಬಸ್ತಿ, ಸಿಯಾನ್ ಅತ್ತಿಕರೆ, ಮುಸ್ತಫ ಚೆನ್ನಾರ್, ನವಾಫ್ ಮಾಂತೂರು, ಮುಝಮ್ಮಿಲ್, ಶೊಹೈಬ್ ಅತ್ತಿಕರೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನ್ಸಾರ್ ಅರಿಗೆಮಜಲ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here